Sunday, September 22, 2024
spot_img
More

    Latest Posts

    ʼಸಫಲʼ ತ್ರೈಮಾಸಿಕ ಪತ್ರಿಕೆಯ ದಸರಾ ಸಂಚಿಕೆ ಬಿಡುಗಡೆ

    ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಗಾಣಿಗ ಯಾನೆ ಸಫಲಿಗ ಸಮಾಜದ ಪ್ರಪ್ರಥಮ ಪತ್ರಿಕೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ʼಸಫಲʼ ತ್ರೈಮಾಸಿಕ ಪತ್ರಿಕೆಯ ದಸರಾ ವಿಶೇಷ ಸಂಚಿಕೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.

    ಕೈಕಂಬ ಗುರುಪುರದ ಬೆನಕ ಸೌಧದಲ್ಲಿರುವ ಸಫಲ ಸೌಹಾರ್ದ ಸಹಕಾರಿ ನಿಯಮಿತ ಸೊಸೈಟಿಯಲ್ಲಿ ಇತ್ತೀಚೆಗೆ ನಡೆದ ಮಾಸಿಕ ಮಹಾಸಭೆಯ ಸಂದರ್ಭದಲ್ಲಿ ಸೊಸೈಟಿಯ ಮುಖ್ಯ ಪ್ರವರ್ತಕರಾದ ಎಸ್. ರಮೇಶ್ ದಸರಾ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.

    ಪತ್ರಿಕೆ ಹಲವಾರು ವರ್ಷಗಳಿಂದ ನಡೆದು ಬಂದ ದಾರಿ ಸಮಾಜದ  ಪ್ರತಿಭೆಗಳನ್ನು ಬೆಳಕಿಗೆ ತಂದ ಬಗೆ, ಸಮಾಜದ ಗಣ್ಯರ ಪರಿಚಯ, ವಿವಾಹ ವೇದಿಕೆ ಒದಗಿಸುವ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದನ್ನೂ ರಮೇಶ್‌ ಅವರು ಉಲ್ಲೇಖಿಸಿ ಮೆಚ್ಚುಗೆ ಸೂಚಿಸಿದರು.

    ಪ್ರಧಾನ ಸಂಪಾದಕ ಹಾಗೂ ಸಫಲ ಸೊಸೈಟಿಯ ಅಧ್ಯಕ್ಷ ಸಂಜೀವ್‌ ಅಡ್ಯಾರ್‌ ಅವರು ಪತ್ರಿಕೆ ನಡೆದು ಬಂದ ದಾರಿ, ಬಳಿಕ ಸ್ಥಾಪನೆಗೊಂಡ ಸೊಸೈಟಿಯ ಸಾಧನೆ ಬಗ್ಗೆ ವಿವರ ನೀಡಿದರು. ಪತ್ರಿಕೆಯ ಅಂದವಾದ ಮುದ್ರಣ ಮಾಡುತ್ತ ಪತ್ರಿಕೆಯ ಬೆನ್ನೆಲುಬಾಗಿರುವ ಬೆಂಗಳೂರು ಮಂಗಳ ಪ್ರಿಂಟರ್ಸ್ ಮಾಲೀಕ ಸುಂದರ ಸಾಲ್ಯಾನ್ ಹಾಗೂ ದುಬೈಯ ಲಕ್ಷ್ಮೀಶ ಕೆ. ಮಿಜಾರ್ ಇವರ ಕೊಡುಗೆಗಳನ್ನು ಸಂಪಾದಕ ಭಾಸ್ಕರ್ ಎಸ್.‌ ಎಡಪದವು ಸ್ಮರಿಸಿಕೊಂಡರು.

    ಪತ್ರಿಕೆಯ ಬೆಳವಣಿಗೆಗೆ ಕಾರಣಕರ್ತರಾದ ದಾನಿಗಳು, ಜಾಹೀರಾತುದಾರರು, ವಿನ್ಯಾಸಕ್ಕೆ ಸಹಕಾರ ನೀಡಿದ ಹಾನ ಪಬ್ಲಿಷರ್ಸ್, ಲೇಖಕರು, ಸಂಪಾದಕ ಮಂಡಳಿ ಹಾಗೂ ಓದುಗರಿಗೆ, ಚಂದಾದಾರರಿಗೆ ಕೃತಜ್ಞತೆಯನ್ನೂ ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.

    ಸಂಬಂಧಿತ ಸುದ್ದಿ: ಆರ್.ಎಂ. ಪ್ರಸಾದ್ ಅವರಿಗೆ ಡಾಕ್ಟರೇಟ್; ತೆಂಗಿನೆಣ್ಣೆಯ ಮಹತ್ವ ಸಾರುವ ಪ್ರಬಂಧ ಮಂಡನೆ

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಸಂಬಂಧಿತ ಸುದ್ದಿ: ಗಾಣದ ಪರಂಪರೆ ಉಳಿಸಲು ಹೀಗೊಂದು ಸಂಪ್ರದಾಯ…

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!