ಬೆಂಗಳೂರು: ಯೂತ್ ಗಾಣಿಗ ಕುಮಟಾ ಹಾಗೂ ಗಾಣಿಗ ಯುವ ಬಳಗ (ರಿ.) ಜಂಟಿಯಾಗಿ ಹಮ್ಮಿಕೊಂಡಿರುವ ಗಾಣಿಗ ಪ್ರೀಮಿಯರ್ ಕಪ್-2022 ಪಂದ್ಯಾವಳಿಯು ನಿನ್ನೆ (ಫೆ. 26) ಉದ್ಘಾಟನೆಗೊಂಡಿದ್ದು, ಇಂದು (ಫೆ.27) ಸಮಾರೋಪಗೊಳ್ಳಲಿದೆ.
ಇದು ಇವರು ಆಯೋಜಿಸುತ್ತಿರುವ ನಾಲ್ಕನೇ ವರ್ಷದ ಪಂದ್ಯಾವಳಿಯಾಗಿದ್ದು, ಸಹಕಾರ ಇಲಾಖೆಯ ಸಹಾಯಕ ನಿಬಂಧಕ ನಾಗಭೂಷಣ ಸಿ. ಕಲ್ಮನೆ ಅವರು ಉದ್ಘಾಟನೆ ಮಾಡಿದರು.
ಇಂದು ಕ್ರಿಕೆಟ್ ಪಂದ್ಯಾವಳಿ ಮಾತ್ರವಲ್ಲದೆ ಗಾಣಿಗ ಸಮಾಜದ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮವೂ ಇರಲಿದೆ. ಅಲ್ಲದೆ ಗಾಣಿಗ ಯುವ ಬಳಗದ ವೆಬ್ಸೈಟ್ ಲೋಕಾರ್ಪಣೆ ಕೂಡ ನಡೆಯಲಿದೆ. ಜತೆಗೆ ಸಭಾ ಕಾರ್ಯಕ್ರಮದ ಬಳಿಕ ಗಾಣಿಗ ಸಮಾಜದ ಮಕ್ಕಳಿಂದ ಮನರಂಜನಾ ಕಾರ್ಯಕ್ರಮದ ಪ್ರಸ್ತುತಿಯೂ ಇರಲಿದೆ.
ಗಾಣಿಗ ಪ್ರೀಮಿಯರ್ ಕಪ್-2022ರ ಪ್ರಥಮ ಬಹುಮಾನವಾಗಿ 35,555 ರೂಪಾಯಿ ಹಾಗೂ ದ್ವಿತೀಯ ಬಹುಮಾನವಾಗಿ 25,555 ರೂಪಾಯಿ ನಗದು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಸಂಬಂಧಿತ ಸುದ್ದಿ: ರಜತ ಮಹೋತ್ಸವ ಸಂಭ್ರಮದಲ್ಲಿ ‘ಸಂಪರ್ಕ ಸುಧಾ’
ಸಂಬಂಧಿತ ಸುದ್ದಿ: ಅಧಿವೇಶನದಲ್ಲಿ ಸದ್ದು ಮಾಡಿತು ಗಾಣಿಗ ನಿಗಮ-ಮಂಡಳಿ ವಿಚಾರ
ಸಂಬಂಧಿತ ಸುದ್ದಿ: ನಿಮಗೆ ಚುನಾವಣೆ ಗೆಲ್ಲಲು ಮೋದಿ ಹೆಸರು ಬೇಕು, ಗಾಣಿಗ ಸಮಾಜ ಬೇಡವೇ..?