ಬೆಂಗಳೂರು: ಸೋಮಕ್ಷತ್ರಿಯ ಗಾಣಿಗರ ಕುಲದೇವರಾದ ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನ ಭಕ್ತವೃಂದವೇ ಪರವಶವಾಗುವಂಥ ದೀಪವೈಭವಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಕಾರಣವಾಗಿದ್ದು ಆರ್ಟ್ ಆಫ್ ಲಿವಿಂಗ್.
ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಶಿಷ್ಯವೃಂದದಿಂದ ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಐದು ದಿನಗಳ ಯೋಗ ತರಬೇತಿ, ಸತ್ಸಂಗ ನಡೆದಿದೆ.
ಯೋಗ ತರಬೇತಿ ಹಾಗೂ ಸತ್ಸಂಗದ ಐದು ದಿನಗಳ ಕಾರ್ಯಕ್ರಮದ ಕೊನೆಯ ದಿನವಾದ ಗುರುವಾರ ದೇವಸ್ಥಾನದಲ್ಲಿ ದೀಪಾರಾಧನೆ ನಡೆಸಲಾಗಿದ್ದು, ಇಡೀ ದೇವಸ್ಥಾನವೇ ದೀಪಗಳಿಂದ ಕಂಗೊಳಿಸಿದೆ. ಜೊತೆಗೆ ಇತರ ಧಾರ್ಮಿಕ ಕಾರ್ಯಕ್ರಮಗಳೂ ನಡೆದಿದ್ದು, ಸಮಾಜ ನೂರಾರು ಮಂದಿ ಪಾಲ್ಗೊಂಡರು.
ಚಿತ್ರ-ವೀಡಿಯೊ ಕೃಪೆ: ಸುಭಾನು ಸ್ಟುಡಿಯೊ
ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀ ವೇಣುಗೋಪಾಲಕೃಷ್ಣ ದೇವರ ದರ್ಶನ ಪಡೆದರು ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಸಂಬಂಧಿತ ಸುದ್ದಿ: ಬಾರ್ಕೂರು ದೇವಳದಲ್ಲಿ ಸಂಭ್ರಮದ ದೀಪೋತ್ಸವ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ..
ಸಂಬಂಧಿತ ಸುದ್ದಿ: ನವರಾತ್ರಿ ಪ್ರಯುಕ್ತ ಬಾರ್ಕೂರು ದೇವಸ್ಥಾನದಲ್ಲಿ ಇಂದಿನಿಂದ 9 ದಿನ ವಲಯವಾರು ಪೂಜೆ