ಬೆಂಗಳೂರು: ಇದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಜನ್ಮದಿನ. ಅವರ ಅಭಿನಯದ ಸಿನಿಮಾ ಅವರ ಗೈರಿನಲ್ಲಿ ಇದೇ ಮೊದಲು ಬಿಡುಗಡೆ ಆಗುತ್ತಿದ್ದರೂ ಹಬ್ಬದ ವಾತಾವರಣ. ಇಲ್ಲವೆಂದರೂ ಒಪ್ಪಿಕೊಳ್ಳಲಾಗದ ತಲ್ಲಣ, ಆದರೂ ಎಲ್ಲೆಲ್ಲೂ ಅಭಿಮಾನದ ತೋರಣ..
ಪುನೀತ್ ರಾಜಕುಮಾರ್ ಅವರ ಕುರಿತು ಗೃಹಿಣಿ ಯಶೋದ ಗಾಣಿಗರಿಂದ ಇದೋ ಅಭಿಮಾನದ ಅಪ್ಪುಗೆಯ ನುಡಿನಮನ..
ತಂದೆ-ತಾಯಿಗೆ ತಕ್ಕ ಮಗನು ಪುನೀತ
ಅಪ್ಪು ಎಂಬ ಪ್ರೀತಿಯ ಬಿರುದಾಂಕಿತ
ಅಕ್ಕ-ಅಣ್ಣಂದಿರ ಮುದ್ದಿನಂಥ ತಮ್ಮನು
ಕರುನಾಡಿಗೆ ಅಪ್ಪು ರಾಜಕುಮಾರನು..
ಕನ್ನಡ ಜನತೆಗೆ ಪುನೀತ್ ಯುವರತ್ನನು
ಬೊಂಬೆ ಹೇಳುತೈತೆ ಹಾಡಲಿ ಜಗ ಗೆದ್ದನು
ಕನ್ನಡಿಗರ ಪಾಲಿಗೆ ಇವರು ಕೋಟ್ಯಧಿಪತಿ
ಸರಳ ಸಜ್ಜನಿಕೆಯ ವ್ಯಕ್ತಿತ್ವದ ಈ ಅಧಿಪತಿ..
ಬಾಲನಟನಾಗಿ ಬೆಳ್ಳಿತೆರೆಯಲಿ ಹೆಜ್ಜೆ ಊರಿ
ಚಿತ್ರರಂಗದಲ್ಲಿ ಆಕಾಶದಷ್ಟು ಎತ್ತರಕ್ಕೆ ಏರಿ
ವಂಶಿ, ಅರಸು, ಅಣ್ಣಾಬಾಂಡ್, ವೀರ ಕನ್ನಡಿಗ
ಅಜಯ್, ಯುವರತ್ನ, ದೊಡ್ಮನೆ ಹುಡುಗ ಅಪ್ಪು..
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರಖ್ಯಾತಿ
ಮನೆಮನೆಯಲ್ಲೂ ಇವರ ಹೆಸರು ದೇಶ ವಿಖ್ಯಾತಿ
ಬೊಂಬೆ ಹೇಳುತೈತೆ ಹಾಡಿನಲಿ ಮೋಡಿಯ ಮಾಡಿಸಿ
ಬಾರದ ಲೋಕಕ್ಕೆ ನೀವು ಹೋಗಿಬಿಟ್ಟಿರಿ ನಮ್ಮನು ತ್ಯಜಿಸಿ..
| ಯಶೋದ ಗಾಣಿಗ, ಗೃಹಿಣಿ, ಕುಂದಾಪುರ
ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ದೀಪವೈಭವ
ಸಂಬಂಧಿತ ಸುದ್ದಿ: ಚಾಮರಾಜಪೇಟೆ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಇದೇ ರವಿವಾರ ಉದ್ಘಾಟನೆ
ಸಂಬಂಧಿತ ಸುದ್ದಿ: ನಿಮಗೆ ಚುನಾವಣೆ ಗೆಲ್ಲಲು ಮೋದಿ ಹೆಸರು ಬೇಕು, ಗಾಣಿಗ ಸಮಾಜ ಬೇಡವೇ..?