ಯುಗಾದಿ ಹಬ್ಬ ಬಂದಿತಮ್ಮ
ಮನೆಮನೆಗೆ ಹಬ್ಬ ತಂದಿತಮ್ಮ
ಸಡಗರ-ಸಂಭ್ರಮ ಬಂತಮ್ಮ
ಹೊಸವರುಷಕೆ ಕಾಲಿಟ್ಟಿತಮ್ಮ..
ಬೇವು-ಬೆಲ್ಲವನ್ನು ಸವಿಯುತ
ಮಕ್ಕಳು ಮನೆಮಂದಿ ಮೆಲ್ಲುತ
ಸಂಗಡದಿ ನಾವು ಸಡಗರದತ್ತ
ಪ್ರಕೃತಿಯ ವಿಸ್ಮಯವು ಎನ್ನುತ..
ತಳಿರು ತೋರಣದಿ ಅಲಂಕರಿಸಿ
ಮನೆಯ ಬಾಗಿಲ ಸಿಂಗಾರಗೊಳಿಸಿ
ಮಾವಿನ ತುಂಬೆಲ್ಲ ಹಚ್ಚ ಹಸಿರು
ಹಬ್ಬದಿ ಮನೆಯಲ್ಲೆಲ್ಲ ಶೋಭಿಸಿಹರು..
ಚೈತ್ರ ಮಾಸವಿದು ಬಂದಮೇಲೆ
ಮಾವಿನ ಮರದಲಿ ಚಿಗುರೆಲೆ
ಬೇವು ಕಹಿಯಾದರೂ ಸವಿಯುತ್ತಲೇ
ಹರುಷದಿ ಹೊಮ್ಮಿದೆ ಪದಮಾಲೆ…
| ಯಶೋದ ಗಾಣಿಗ, ಗೃಹಿಣಿ, ಕುಂದಾಪುರ.
ಸಂಬಂಧಿತ ಸುದ್ದಿ: ಕವನ: ಶಿವಭಕ್ತಿ- ಜಪಿಸುವೆವು ಮಂತ್ರ ಓಂ ನಮಃ ಶಿವಾಯ
ಸಂಬಂಧಿತ ಸುದ್ದಿ: ಪ್ರಧಾನಿ ಮೋದಿ ಕುರಿತೊಂದು ಕವನ, ಬರೆದರೀ ಸಜ್ಜನ…
ಸಂಬಂಧಿತ ಸುದ್ದಿ: ಕೇರಳದ ಕವಯಿತ್ರಿ ಸಜಿನಿ ಮನೋಜ್ ಅವರ ಕವನಸಂಕಲನ ಬಿಡುಗಡೆ