ಬೆಂಗಳೂರು: ಕಾರ ಹುಣ್ಣಿಮೆ ಪ್ರಯುಕ್ತ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ಗಾಣದೇವಿಯ ಉಡಿತುಂಬವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾಂಗವಾಗಿ ನೆರವೇರಿತು.
ಕಾರಹುಣ್ಣಿಮೆಯ ದಿನ ಗಾಣದ ಎತ್ತುಗಳನ್ನು ಸಿಂಗರಿಸಿ ಪೂಜಿಸಿ ಗಾಣದೇವಿಯ ಉಡಿಯ ತುಂಬಿ ಪೂಜೆ ಮಾಡುವ ಸಂಪ್ರದಾಯ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಅನ್ನ ನೀಡಿದ ದೇವತೆ ಗಾಣದೇವಿ ಪೂಜೆ ಮಾಡಿ ಉಡಿಯ ತುಂಬುವುದರಿಂದ ಕುಲದೇವತೆಯ ಆಶೀರ್ವಾದ ವರ್ಷಪೂರ್ತಿ ಇರುತ್ತದೆ ಎಂದು ನಂಬಿಕೆಯೊಂದಿಗೆ ಈ ಸಂಪ್ರದಾಯ ನಡೆದುಬಂದಿದೆ.
ರಾಜ್ಯದ ಹಲವು ಹಳ್ಳಿಗಳಲ್ಲಿ ಕಲ್ಲಿನ ಗಾಣಗಳು ಇಂದಿಗೂ ಇವೆ. ಆಧುನಿಕತೆಯ ಭರಾಟೆಯಲ್ಲಿ ಎತ್ತುಗಳು ಇಲ್ಲದಿದ್ದರೂ ಈ ಗಾಣಗಳು ಕುಲಕಸುಬಿನ ಕುರುಹುಗಳಾಗಿದ್ದು, ಇದು ಗಾಣಿಗರಿಗೆ ಅನ್ನ ನೀಡಿದ ಗಾಣದೇವಿ ಎಂದೇ ಹೇಳುವ ಜನರು ಕಾರಹುಣ್ಣಿಮೆಯಂದು ಉಡಿತುಂಬಿ ಪೂಜಿಸುತ್ತಾರೆ.
ಈ ಕಾರಹುಣ್ಣಿಮೆಯಂದು ಹೀಗೆ ಪೂಜಿಸಿದ ಗಾಣಿಗ ಸಮಾಜದ ಬಂಧುಗಳು, ಹಿರಿಯರು ಗಾಣದೇವಿಗೆ ನಮಿಸಿ ಆಶೀರ್ವಾದ ಕೃಪೆಗೆ ಪಾತ್ರರಾದರು.
ಸಂಬಂಧಿಸಿದ ಸುದ್ದಿ: ಗಾಣದ ಪರಂಪರೆ ಉಳಿಸಲು ಹೀಗೊಂದು ಸಂಪ್ರದಾಯ…
ಸಂಬಂಧಿಸಿದ ಸುದ್ದಿ: ಅದ್ಧೂರಿ ಗಾಣದ ಕೊಟ್ಯದ ಪ್ರವೇಶೋತ್ಸವ ಮತ್ತು ಶನಿಪೂಜೆ
ಸಂಬಂಧಿಸಿದ ಸುದ್ದಿ: ಶತಾಯುಷ್ಯದ ಹೊಸ್ತಿಲಲ್ಲಿ ತಾಯಿ; ನೂರನೇ ಜನ್ಮದಿನದ ಶುಭಾಶಯ ಕೋರಿದ ಪುತ್ರ ಮೋದಿ