ಬೆಂಗಳೂರು: ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟಿ ಅವರ 101ನೇ ವಾರ್ಷಿಕ ಆರಾಧನಾ ಮಹೋತ್ಸವ ಇಂದು ಬೆಂಗಳೂರಿನ ಕೋಟೆ ಆವರಣದಲ್ಲಿರುವ ಶ್ರೀಲಕ್ಷ್ಮೀನರಸಿಂಹಸ್ವಾಮಿ ಧರ್ಮಸಂಸ್ಥೆಯಲ್ಲಿ ನಡೆಯಲಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ಬೆಳಗಿನಿಂದ ಮಧ್ಯಾಹ್ನದವರೆಗೆ ನಿರಂತರ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಗಳ ವಿವರ ಇಂತಿದೆ.
• ಬೆಳಗ್ಗೆ 6ರಿಂದ 7 ರವರೆಗೆ ಅಭಿಷೇಕ
• 7-00 ರಿಂದ 7-30 ರವರೆಗೆ ವಿದ್ಯಾರ್ಥಿ ವೃಂದದಿಂದ ಸಮಾಧಿ ಬಳಿ ಪೂಜೆ
• 8-30 ರಿಂದ 9-30 ರವರೆಗೆ ಶ್ರೀಯುತರ ಭಾವ ಚಿತ್ರಗಳ ಮೆರವಣಿಗೆ
• 10 ಗಂಟೆಗೆ ಸಾಧುಗಳಿಂದ ಸಮಾಧಿ ಬಳಿ ಅಖಂಡ ಪೂಜೆ
• 10-45ಕ್ಕೆ ಜನಾಂಗದವರು ಮತ್ತು ಸಾರ್ವಜನಿಕರಿಂದ ಪೂಜೆ :
• 12-30 ಗಂಟೆಗೆ ಪ್ರಸಾದ ವಿನಿಯೋಗ
ಶ್ರೀಲ.ನ. ಧರ್ಮಸಂಸ್ಥೆಯ ಮಾಜಿ ಅಧ್ಯಕ್ಷರು, ಸದಸ್ಯರು ಹಿರಿಯ ವಿದ್ಯಾರ್ಥಿಗಳು, ಕಾರ್ಯದರ್ಶಿಗಳು, ಸಿಬ್ಬಂದಿವರ್ಗ ಹಾಗೂ ಶ್ರೀ ಲ.ನ. ಆಶ್ರಮದ ವಿದ್ಯಾರ್ಥಿಗಳು, ಜೆ.ವಿ. ಸಂಘ-ಸಂಸ್ಥೆಗಳು ಮತ್ತು ಜ್ಯೋತಿನಗರ ವೈಶ್ಯ ಜನಾಂಗದವರ ಸಹಕಾರದಲ್ಲಿ ಈ ಸಮಾರಂಭ ನಡೆಯಲಿದೆ.
ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..
ಸಂಬಂಧಿತ ಸುದ್ದಿ: ಆಗಸ್ಟ್ 7ರಂದು ಗಾಣಿಗ ಯುವ ಬಳಗದಿಂದ 3ನೇ ಪ್ರತಿಭಾ ಪುರಸ್ಕಾರ
ಸಂಬಂಧಿತ ಸುದ್ದಿ: ಗಾಣಿಗ ಸಮಾಜ ಯುವಕ ಮಂಡಳದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ