ಬೆಂಗಳೂರು: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಶಕ್ತಿದೇವತೆ ನೆಲ್ಲಿಕೇರಿಯ ಪುರದೀಶ್ವರಿ ಮಹಾಸತಿ ದೇವಾಲಯದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆದಿದ್ದು, ಗಾಣಿಗ ಯುವ ಬಳಗದಿಂದಲೂ ಪೂಜೆ ನೆರವೇರಿದೆ.
ಕುಮಟಾ ಗಾಣಿಗ ಯುವ ಬಳಗವು ಪ್ರತಿವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವದ ಸಾಮೂಹಿಕ ಪೂಜೆಯಲ್ಲಿ ಪಾಲ್ಗೊಂಡಿದ್ದು, ದೇವಿಗೆ ಪೂಜೆಯನ್ನು ಅರ್ಪಿಸಿದೆ. ವಿಜಯದಶಮಿ ದಿನವಾದ ಅ. 5ರ 8-30ರಿಂದ ಪೂಜೆ ಪ್ರಾರಂಭವಾಗಿ ಸಂಪನ್ನಗೊಂಡಿತು.
ಪುರದೀಶ್ವರಿ ಸನ್ನಿಧಾನದಲ್ಲಿ ನಡೆದ ಈ ಶರನ್ನವರಾತ್ರಿಯ ಮಹಾಪೂಜೆಯಲ್ಲಿ ಗಾಣಿಗ ಯುವ ಬಳಗದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಹಾಗೂ ಭಕ್ತಾದಿಗಳು ಆಗಮಿಸಿ ಜಗನ್ಮಾತೆಯ ಅನುಗ್ರಹಕ್ಕೆ ಪಾತ್ರರಾದರು.
ಸಂಬಂಧಿತ ಸುದ್ದಿ: ಕೆಪಿಸಿಸಿ ಮುಖ್ಯ ವಕ್ತಾರ ಸ್ಥಾನಕ್ಕೆ ವಿ.ಆರ್. ಸುದರ್ಶನ್ ರಾಜೀನಾಮೆ; ಕಾರಣ ಮಹತ್ವದ್ದು..
ಸಂಬಂಧಿತ ಸುದ್ದಿ: ಗಾಣಿಗ ನಿಗಮ-ಮಂಡಳಿಗಾಗಿ ಮೋದಿಯ ಸೆಳೆಯುವತ್ತ ಗಾಣಿಗ ಮುಖಂಡರ ಚಿತ್ತ
ಸಂಬಂಧಿತ ಸುದ್ದಿ: ರಾಜ್ಯ ದಸರಾ ಕ್ರೀಡಾಕೂಟದಲ್ಲಿ ಅವಳಿ ಸಹೋದರಿಯರಿಗೆ ಎರಡು ಚಿನ್ನದ ಪದಕ