ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಎಂದರೇನೇ ಭಾರಿ ಸಂಭ್ರಮ. ದಸರಾ ಎಂದರೆ ಅಂಬಾರಿ, ಜಂಬೂಸವಾರಿ, ಕುಸ್ತಿ ಕಾಳಗ, ಬೊಂಬೆಗಳ ಪ್ರದರ್ಶನ ಒಂದೇ ಎರಡೇ?
ಅದರಲ್ಲೂ ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶನನ್ನು, ನವರಾತ್ರಿ ಸಂದರ್ಭದಲ್ಲಿ ಕೆಲವು ಮನೆಗಳಲ್ಲಿ ದಸರಾ ಬೊಂಬೆಗಳನ್ನೂ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
ನವರಾತ್ರಿ ಉತ್ಸವದ ಸಾಂಸ್ಕೃತಿಕ ಬೊಂಬೆಗಳ ಸಾಲುಗಳಲ್ಲಿ ಶ್ರಮಿಕ ವರ್ಗದ ವಿವಿಧ ರೀತಿಯ ಗಾಣಗಳ ಬೊಂಬೆಗಳನ್ನೂ ಪ್ರತಿಷ್ಠಾಪಿಸಿ ಆಚರಣೆ ಮಾಡಲಾಗುತ್ತಿದೆ. ಬೆಂಗಳೂರಿನ ಮೈಸೂರು ರಸ್ತೆಯ ಕಸ್ತೂರಿಬಾ ನಗರದ ತಮ್ಮ ಮನೆಯಲ್ಲಿ ಬೊಂಬೆಗಳ ನಡುವೆ ಗಾಣದ ಪ್ರತಿಮೆಯನ್ನೂ ಇರಿಸಿ ದಸರಾ ಆಚರಿಸಿದ್ದ ವಿಷಯವನ್ನು ನಾಗೇಂದ್ರ ಮುನಿಯಪ್ಪ ಅವರು ಗ್ಲೋಬಲ್ ಗಾಣಿಗ.ಕಾಂ ಜೊತೆ ಹಂಚಿಕೊಂಡಿದ್ದಾರೆ.
ಸಂಬಂಧಿತ ಸುದ್ದಿ: ಕೆಪಿಸಿಸಿ ಮುಖ್ಯ ವಕ್ತಾರ ಸ್ಥಾನಕ್ಕೆ ವಿ.ಆರ್. ಸುದರ್ಶನ್ ರಾಜೀನಾಮೆ; ಕಾರಣ ಮಹತ್ವದ್ದು..
ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..
ಸಂಬಂಧಿತ ಸುದ್ದಿ: ಗಾಣಿಗ ನಿಗಮ-ಮಂಡಳಿಗಾಗಿ ಮೋದಿಯ ಸೆಳೆಯುವತ್ತ ಗಾಣಿಗ ಮುಖಂಡರ ಚಿತ್ತ