ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಮತ್ತು ಕುಟುಂಬಸ್ಥರು ನಿನ್ನೆ ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡಿದ್ದರಿಂದ ಗಾಯಗೊಂಡಿದ್ದರು. ಅವರೆಲ್ಲರೂ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಹ್ಲಾದ್ ಗಾಂಧಿ ಇದೀಗ ಆ ಕುರಿತು ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ.
ಇಂದು ಆಸ್ಪತ್ರೆಯಲ್ಲೇ ಸುದ್ದಿಗೋಷ್ಠಿ ನಡೆಸಿದ ಅವರು, ಅಪಘಾತದ ಬಗ್ಗೆ, ಆ ನಂತರದ ಸ್ಥಿತಿ ಹಾಗೂ ಕನ್ನಡಿಗರು ಪ್ರತಿಕ್ರಿಯಿಸಿ ನೆರವಾದ ರೀತಿಗೆ ತಮ್ಮ ಧನ್ಯವಾದ ತಿಳಿಸಿದ್ದಾರೆ.
ಇಲ್ಲಿನ ಜನರು ನೀಡಿದ ಸಹಕಾರ, ಕಮಾಂಡೋಗಳ ನೀಡಿದ ನೆರವನ್ನು ಮರೆಯಲು ಸಾಧ್ಯವಿಲ್ಲ. ಸ್ಥಳೀಯರು ಆದಷ್ಟು ಬೇಗ ನಮ್ಮನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿದರು. ಆಸ್ಪತ್ರೆಯಲ್ಲೂ ತಮ್ಮ ಮನೆಯವರಂತೆ ನೋಡಿಕೊಂಡರು, ನಾವು ನಮ್ಮ ಕುಟುಂಬ ಕರ್ನಾಟಕದ ಜನರ ಆಶೀರ್ವಾದದಿಂದ ಚೆನ್ನಾಗಿದ್ದೇವೆ. ನಿಮ್ಮೆಲ್ಲರ ಈ ಸ್ಪಂದನೆಯಿಂದ ಕರ್ನಾಟಕದಲ್ಲೂ ನಮ್ಮ ಪರಿವಾರ ಇದೆ ಎಂಬ ಭಾವನೆ ಮೂಡಿದೆ ಎಂದು ಪ್ರಹ್ಲಾದ್ ಮೋದಿ ಹೇಳಿದರು.
ಮಾಧ್ಯಮದವರಿಗೂ ಮೆಚ್ಚುಗೆ: ಕರ್ನಾಟಕದ ಬಿಜೆಪಿಯವರು ಹಾಗೂ ಪ್ರತಿಪಕ್ಷದವರು ಕೂಡ ಬಂದು ನಮ್ಮನ್ನು ನೋಡಿಕೊಂಡು ಆರೋಗ್ಯದ ಬಗ್ಗೆ ವಿಚಾರಿಸಿ ಹೋಗಿದ್ದಾರೆ. ಮೋದಿಯವರ ಜೊತೆಯೂ ನಾನು ಮಾತನಾಡಿದೆ. ಎಲ್ಲಕ್ಕಿಂತ ಹೆಚ್ಚು ಮಾಧ್ಯಮದವರು ಸಂಯಮದಿಂದ ನಡೆದುಕೊಂಡರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೀಟ್ ಬೆಲ್ಟ್ ಧರಿಸಿ: ನಾವು ಸೀಟ್ ಬೆಲ್ಟ್ ಹಾಕಿಕೊಂಡಿದ್ದ ಕಾರಣ ಏರ್ಬ್ಯಾಗ್ ತೆರೆದುಕೊಂಡು ನಾವೆಲ್ಲ ಬದುಕಿದೆವು. ಎಲ್ಲರೂ ಪ್ರಯಾಣ ಮಾಡುವಾಗ ಸೀಟ್ ಬೆಲ್ಟ್ ಧರಿಸಿ ಎಂಬ ಕಿವಿಮಾತನ್ನು ಹೇಳಿದ ಪ್ರಹ್ಲಾದ್ ಮೋದಿ, ದೇವರ ದಯೆಯಿಂದ ನಾವೆಲ್ಲ ಬದುಕುಳಿದೆವು ಎಂದು ಹೇಳಿಕೊಂಡಿದ್ದಾರೆ.
ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..
ಸಂಬಂಧಿತ ಸುದ್ದಿ: ಪ್ರಧಾನಿ ಸಹೋದರ-ಕುಟುಂಬಸ್ಥರಿದ್ದ ಕಾರು ಅಪಘಾತ; ಇಲ್ಲಿದೆ ಲೇಟೆಸ್ಟ್ ಅಪ್ಡೇಟ್ಸ್
ಸಂಬಂಧಿತ ಸುದ್ದಿ: ನಿಮಗೆ ಚುನಾವಣೆ ಗೆಲ್ಲಲು ಮೋದಿ ಹೆಸರು ಬೇಕು, ಗಾಣಿಗ ಸಮಾಜ ಬೇಡವೇ..?