ಬೆಂಗಳೂರು: ಮೂಲತಃ ಕನ್ನಡತಿಯಾಗಿದ್ದು ಸದ್ಯ ತಮಿಳುನಾಡಿನಲ್ಲಿ ಸೇಲಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಎಸ್. ದೀಪಾ ಗಾಣಿಗೇರ ಅವರು ತಮಿಳುನಾಡು ಮುಖ್ಯಮಂತ್ರಿಯವರ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ.
ಸೇಲಂ ಎಸ್ಪಿ ಆಗಿ ದೀಪಾ ಗಾಣಿಗೇರ ಅವರ ಉತ್ತಮ ಸೇವೆ ಪರಿಗಣಿಸಿ ಕಳೆದ ಆಗಸ್ಟ್ ತಿಂಗಳಲ್ಲೇ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ತಮಿಳುನಾಡು ರಾಜ್ಯ ಪೊಲೀಸ್ ಮಹಾನಿರ್ದೇಶಕ ಜಿ.ಕೆ. ತ್ರಿಪಾಠಿ ಅವರು ಫೆ. 27ರಂದು ದೀಪಾ ಗಾಣಿಗೇರರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ ಮಾಡಿದರು. ಪ್ರಶಸ್ತಿಯು ಚಿನ್ನದ ಪದಕದ ಜೊತೆಗೆ 25 ಸಾವಿರ ರೂಪಾಯಿ ನಗದನ್ನೂ ಹೊಂದಿದೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹೊಳೆ ಇಟಗಿಯ ಶಿವರುದ್ರಪ್ಪ ಗಾಣಿಗೇರ ಅವರ ಪುತ್ರಿ ದೀಪಾ, 2012ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ತಮಿಳುನಾಡಿನ ಸೇಲಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಇಲಾಖೆ ಹಾಗೂ ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಸಂಬಂಧಿತ ಸುದ್ದಿ: ಪ್ರಜ್ಞಾ ಪ್ರಕಾಶ್ಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ
ಸಂಬಂಧಿತ ಸುದ್ದಿ: ಸಂತೋಷ ಗಾಣಿಗರಿಗೆ ಮುಖ್ಯಮಂತ್ರಿ ಚಿನ್ನದ ಪದಕ