Thursday, May 2, 2024
spot_img
More

    Latest Posts

    ರಾಯಚೂರಿನಲ್ಲಿ ಜ. 21ರಂದು ಗಾಣಿಗರ ವಧು-ವರರ ರಾಜ್ಯಮಟ್ಟದ ಸಮಾವೇಶ

    ಬೆಂಗಳೂರು: ಗಾಣಿಗ ಸಮುದಾಯದವರ ನಡುವಿನ ಸಂಬಂಧ ಬೆಸೆಯುವ  ನಿಟ್ಟಿನಲ್ಲಿ ಗಾಣಿಗರ ವಧು-ವರರ ರಾಜ್ಯ ಸಮಾವೇಶವನ್ನು ಇದೇ ಜನವರಿಯ 21ರಂದು ರಾಯಚೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

    ರಾಯಚೂರು ಜಿಲ್ಲೆಯ ಆಶಾಪುರ ರಸ್ತೆಯ ಎಸ್‌ಆರ್‌ಕೆ ಕಲ್ಯಾಣಮಂಟಪದಲ್ಲಿ ಈ ವಧು-ವರರ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಅರ್ಹ ಹಾಗೂ ಆಸಕ್ತರನ್ನು ಆಹ್ವಾನಿಸಲಾಗಿದೆ.

    ಈ ಕಾರ್ಯಕ್ರಮವನ್ನು ವನಶ್ರೀ ಮಠದ ಶ್ರೀಡಾ.ಜಯಬಸವಕುಮಾರ ಸ್ವಾಮೀಜಿ, ಶ್ರೀಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಗಾಣಿಗ ಸಮಾಜದ ಮಾಜಿ ಕಾರ್ಯಾಧ್ಯಕ್ಷ ಅಮರಗುಂಡಪ್ಪ ಮೇಟಿ ಆಗಮಿಸಲಿದ್ದು, ರಾಯಚೂರು ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ಚನ್ನಪ್ಪ ಸಜ್ಜನ್‌ ಅಧ್ಯಕ್ಷತೆ ವಹಿಸಲಿದ್ದಾರೆ.

    ವಿವರಗಳಿಗಾಗಿ ಇವರನ್ನು ಸಂಪರ್ಕಿಸಿ

    • ಚನ್ನಪ್ಪ ಸಜ್ಜನ: 9731046016
    • ಅಣ್ಣಾರಾವ್ ಪಾಟೀಲ್: 9845641258
    • ಪಂಪನ್ನ ಹೊಕ್ರಾನಿ: 8618708623
    • ಉಮಾಶಂಕರ್ ಸಜ್ಜನ್: 9844081594
    • ಚಂದ್ರಶೇಖರ್ ಸಜ್ಜನ್ ಕಲ್ಮಳಿ: 9448757533
    • ವಿಜಯ ಕುಮಾರ್ ಸಜ್ಜನ್: 9845275118

    ಸಂಬಂಧಿತ ಸುದ್ದಿ: ದಿನದ ಶುಭಾಶಯ ಎಂಬ ಹೊಸ ಅವಕಾಶ: ಮೊದಲ 25 ಮಂದಿಗೆ ಶುಲ್ಕದಲ್ಲಿ ಶೇ. 50 ರಿಯಾಯಿತಿ

    ಸಂಬಂಧಿತ ಸುದ್ದಿ: ಸಮುದಾಯದ ಬೇಡಿಕೆಗಳನ್ನು ಈಡೇರಿಸುವಂತೆ ಗಾಣಿಗರ ಸಂಘದಿಂದ ಮತ್ತೆ ಸಿಎಂ ಭೇಟಿ

    ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!