ಬೆಂಗಳೂರು: ಗಾಣಿಗ ಸಮುದಾಯದವರ ನಡುವಿನ ಸಂಬಂಧ ಬೆಸೆಯುವ ನಿಟ್ಟಿನಲ್ಲಿ ಗಾಣಿಗರ ವಧು-ವರರ ರಾಜ್ಯ ಸಮಾವೇಶವನ್ನು ಇದೇ ಜನವರಿಯ 21ರಂದು ರಾಯಚೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಯಚೂರು ಜಿಲ್ಲೆಯ ಆಶಾಪುರ ರಸ್ತೆಯ ಎಸ್ಆರ್ಕೆ ಕಲ್ಯಾಣಮಂಟಪದಲ್ಲಿ ಈ ವಧು-ವರರ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಅರ್ಹ ಹಾಗೂ ಆಸಕ್ತರನ್ನು ಆಹ್ವಾನಿಸಲಾಗಿದೆ.
ಈ ಕಾರ್ಯಕ್ರಮವನ್ನು ವನಶ್ರೀ ಮಠದ ಶ್ರೀಡಾ.ಜಯಬಸವಕುಮಾರ ಸ್ವಾಮೀಜಿ, ಶ್ರೀಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಗಾಣಿಗ ಸಮಾಜದ ಮಾಜಿ ಕಾರ್ಯಾಧ್ಯಕ್ಷ ಅಮರಗುಂಡಪ್ಪ ಮೇಟಿ ಆಗಮಿಸಲಿದ್ದು, ರಾಯಚೂರು ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ಚನ್ನಪ್ಪ ಸಜ್ಜನ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಿವರಗಳಿಗಾಗಿ ಇವರನ್ನು ಸಂಪರ್ಕಿಸಿ
- ಚನ್ನಪ್ಪ ಸಜ್ಜನ: 9731046016
- ಅಣ್ಣಾರಾವ್ ಪಾಟೀಲ್: 9845641258
- ಪಂಪನ್ನ ಹೊಕ್ರಾನಿ: 8618708623
- ಉಮಾಶಂಕರ್ ಸಜ್ಜನ್: 9844081594
- ಚಂದ್ರಶೇಖರ್ ಸಜ್ಜನ್ ಕಲ್ಮಳಿ: 9448757533
- ವಿಜಯ ಕುಮಾರ್ ಸಜ್ಜನ್: 9845275118
ಸಂಬಂಧಿತ ಸುದ್ದಿ: ದಿನದ ಶುಭಾಶಯ ಎಂಬ ಹೊಸ ಅವಕಾಶ: ಮೊದಲ 25 ಮಂದಿಗೆ ಶುಲ್ಕದಲ್ಲಿ ಶೇ. 50 ರಿಯಾಯಿತಿ
ಸಂಬಂಧಿತ ಸುದ್ದಿ: ಸಮುದಾಯದ ಬೇಡಿಕೆಗಳನ್ನು ಈಡೇರಿಸುವಂತೆ ಗಾಣಿಗರ ಸಂಘದಿಂದ ಮತ್ತೆ ಸಿಎಂ ಭೇಟಿ
ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ