ಬೆಂಗಳೂರು: ಕುಂದಾಪುರ ಶ್ರೀವ್ಯಾಸರಾಜ ಮಠದ ಶ್ರೀಮದ್ ಶ್ರೀಲಕ್ಷ್ಮೀಂದ್ರ ತೀರ್ಥ ಶ್ರೀಪಾದಂಗಳವರು ಶಿರಸಿ ಯಲ್ಲಾಪುರ ರಸ್ತೆಯಲ್ಲಿರುವ ಕುಂದಾಪುರ ವ್ಯಾಸರಾಜ ಮಠಕ್ಕೆ ಮಾರ್ಚ್ 16ರಂದು ಆಗಮಿಸಲಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಅವರಿಂದ ಮುದ್ರಾಧಾರಣೆ ಹಾಗೂ ಆಶೀರ್ವಚನ ಇರಲಿದೆ.
ಶಿರಸಿಯ ಗಾಣಿಗ ಸಮಾಜ ಅಭಿವೃದ್ಧಿ ಸಮಿತಿಯು ಈ ಕಾರ್ಯಕ್ರಮವನ್ನು ಶಿರಸಿ ಯಲ್ಲಾಪುರ ರಸ್ತೆಯಲ್ಲಿರುವ ಕುಂದಾಪುರ ವ್ಯಾಸರಾಜ ಮಠದ ಹುಲೇಕಲ್ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಏರ್ಪಡಿಸಿದ್ದು, ಸಮಾಜ ಬಾಂಧವರು ಇದರಲ್ಲಿ ಭಾಗಿಯಾಗಿ ಪೂಜ್ಯ ಸ್ವಾಮೀಜಿಯವರ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ಶ್ರೀಗಳ ಪಾದಪೂಜೆ ನಡೆಸಲು ಕೂಡ ಅವಕಾಶ ಇರಲಿದೆ.
ತೃತೀಯ ವರ್ಧಂತಿ ಉತ್ಸವ: ವ್ಯಾಸರಾಜ ಮಠದ ಆವರಣದಲ್ಲಿ ಶ್ರೀಗಳ ಅಮೃತಹಸ್ತದಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಅಮೃತಶಿಲೆಯ ಸಾಕ್ಷಿ ಗಣಪತಿ ದೇವಸ್ಥಾನದ ತೃತೀಯ ವರ್ಧಂತಿ ಉತ್ಸವ ಕೂಡ ಇದೇ ಸಂದರ್ಭದಲ್ಲಿ ನೆರವೇರಲಿದೆ. ಈ ಕಾರ್ಯಕ್ರಮವು ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ರ ವರೆಗೆ ನಡೆಯಲಿದೆ ಎಂದು ಗಾಣಿಗ ಸಮಾಜ ಅಭಿವೃದ್ಧಿ ಸಮಿತಿ ತಿಳಿಸಿದೆ.
ಸಮಿತಿ ನೇತೃತ್ವ: ಸಮಿತಿಯ ಗೌರವಾಧ್ಯಕ್ಷ ಶ್ರೀನಿವಾಸ ಪಿ. ಶೆಟ್ಟಿ, ಅಧ್ಯಕ್ಷ ಚಂದ್ರಶೇಖರ ಜಿ. ಶೆಟ್ಟಿ, ಕಾರ್ಯದರ್ಶಿ ರತ್ನಾಕರ ಪಿ. ಶೆಟ್ಟಿ ಹಾಗೂ ಟ್ರಸ್ಟಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಮಾಹಿತಿಗೆ ಮೊಬೈಲ್ ಫೋನ್ ಸಂಖ್ಯೆ 98452 99185, 82178 23191 ಸಂಪರ್ಕಿಸಬಹುದು.
ಸಂಬಂಧಿತ ಸುದ್ದಿ: ಮತ್ತೆ ಗಾಣಿಗ ಸಮಾಜದ ಉಸ್ತುವಾರಿಯಲ್ಲಿ ವ್ಯಾಸರಾಜ ಮಠ
ಸಂಬಂಧಿತ ಸುದ್ದಿ: ಗಾಣಿಗ ಸಮಾಜ ಅಭಿವೃದ್ಧಿ ಸಮಿತಿ ಮಹಾಸಭೆ, ಸಾಧಕರಿಗೆ ಸನ್ಮಾನ
ಸಂಬಂಧಿತ ಸುದ್ದಿ: ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಇನ್ನೊಂದು ವಾರಪೂರ್ತಿ ಧಾರ್ಮಿಕ ಕಾರ್ಯಕ್ರಮ
ಸಂಬಂಧಿತ ಸುದ್ದಿ: ಜ. 17ರಂದು ಗಾಣಿಗ ಸಮಾಜ ಅಭಿವೃದ್ಧಿ ಸಮಿತಿ ವಾರ್ಷಿಕ ಮಹಾಸಭೆ