ಬೆಂಗಳೂರು: ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಹುಲೇಕಲ್ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿರುವ ವಿಶ್ವಂಭರ ನಾಮಕ ಶ್ರೀ ಬಾಗಿಲು ಗಣಪತಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 10ರಂದು ಗಣೇಶ ಚತುರ್ಥಿ ಹಾಗೂ ಸೆಪ್ಟೆಂಬರ್ 11ರಂದು ಇಲಿ ಪಂಚಮಿ ಉತ್ಸವ ಮತ್ತು ವಿಶೇಷ ಗಣಹವನ ನೆರವೇರಲಿದೆ.
ಶ್ರೀಮದ್ ವ್ಯಾಸರಾಜರಿಂದ ಪೂಜಿತ, ಪ್ರತ್ಯಕ್ಷವಾಗಿ ನೈವೇದ್ಯ ಸ್ವೀಕರಿಸಿ ಕ್ಷಿಪ್ರಸಿದ್ಧಿ ಗಣಪತಿ ಎಂದೇ ಪ್ರಸಿದ್ಧಿ ಪಡೆದಿರುವ ಈ ದೇವಸ್ಥಾನವು ಇಲ್ಲಿರುವ ಕುಂದಾಪುರ ಶ್ರೀ ವ್ಯಾಸರಾಜ ಮಠದ ಆವರಣದಲ್ಲಿದ್ದು, ಗಾಣಿಗ ಸಮುದಾಯದವರಿಂದಲೇ ನಿರ್ವಹಣೆ ಆಗುತ್ತಿದೆ.
ಸೆ. 10 ಮತ್ತು 11ರಂದು ಈ ಕ್ಷೇತ್ರದಲ್ಲಿ ಮೋದಕ-ಕಡುಬು ಸಮರ್ಪಣೆ, ವಿಶೇಷ ಗಣಹವನ ಸೇರಿ ಹಲವಾರು ಸೇವೆಗಳು ನೆರವೇರಲಿವೆ. ಸೇವೆ ನೀಡಲು ಇಚ್ಛಿಸುವ ಭಕ್ತಾದಿಗಳು ಚೆಕ್/ಡಿಡಿ ಅಥವಾ ಮನಿಯಾರ್ಡರ್ ಮೂಲಕ ಹಣ ಕಳುಹಿಸಬಹುದು. ಸೇವಾಶುಲ್ಕ ಪಾವತಿಸಿದ ಕುರಿತ ರಶೀದಿ ಹಾಗೂ ಸೇವೆಯ ಹೆಸರನ್ನು 6362535375 ನಂಬರ್ಗೆ ಕರೆ ಮಾಡಿ ಅಥವಾ ವಾಟ್ಸ್ಆ್ಯಪ್/ಎಸ್ಎಂಎಸ್ ತಿಳಿಸಬಹುದು. ಆಸಕ್ತರು ಹೆಚ್ಚಿನ ಮಾಹಿತಿಗೆ 6362535375 ಅಥವಾ 8277456018 ಮೊಬೈಲ್ಫೋನ್ ನಂಬರ್ಗಳನ್ನು ಸಂಪರ್ಕಿಸಬಹುದು.
ಹಣ ಕಳುಹಿಸಬೇಕಾದ ಖಾತೆ ವಿವರ
ಖಾತೆ ಹೆಸರು: ಶ್ರೀಲಕ್ಷ್ಮೀನಾರಾಯಣ ಟೆಂಪಲ್ ಹುಲೇಕಲ್
ಉಳಿತಾಯ ಖಾತೆ ಸಂಖ್ಯೆ: 03192200037292
ಐಎಫ್ಎಸ್ಸಿ ಕೋಡ್: CNRB0010319 (ಎಲ್ಲ ‘0’ ಝೀರೋ)
ಬ್ಯಾಂಕ್, ಶಾಖೆ: ಕೆನರಾ ಬ್ಯಾಂಕ್, ಹುಲೇಕಲ್ ಶಾಖೆ.
ಸಂಬಂಧಿತ ಸುದ್ದಿ: ಮತ್ತೆ ಗಾಣಿಗ ಸಮಾಜದ ಉಸ್ತುವಾರಿಯಲ್ಲಿ ವ್ಯಾಸರಾಜ ಮಠ
ಸಂಬಂಧಿತ ಸುದ್ದಿ: ಏ.1ರಂದು ಶ್ರೀಮದ್ ವ್ಯಾಸರಾಜರ 480ನೇ ಆರಾಧನಾ ಮಹೋತ್ಸವ
ಸಂಬಂಧಿತ ಸುದ್ದಿ: ವ್ಯಾಸರಾಜ ಮಠದ ಶ್ರೀ ಲಕ್ಷ್ಮೀಂದ್ರ ತೀರ್ಥರಿಂದ ಮುದ್ರಾಧಾರಣೆ, ಆಶೀರ್ವಚನ, ವರ್ಧಂತ್ಯುತ್ಸವ
ಸಂಬಂಧಿತ ಸುದ್ದಿ: ಶ್ರೀ ಲಕ್ಷ್ಮೀಂದ್ರ ತೀರ್ಥರಿಂದ ಮಾ.16ರಂದು ವ್ಯಾಸರಾಜ ಮಠದಲ್ಲಿ ಮುದ್ರಾಧಾರಣೆ- ಆಶೀರ್ವಚನ