ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದವರ ಕುಲದೇವರಾದ ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಾಲಯದಲ್ಲಿ ಇಂದಿನಿಂದ ಒಂಬತ್ತು ದಿನಗಳ ಕಾಲ ವಲಯವಾರು ಪೂಜೆ ನೆರವೇರಲಿದೆ.
ನವರಾತ್ರಿ ಪ್ರಯುಕ್ತ ಈ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು ಗಾಣಿಗ ಸಮಾಜದ ವಿವಿಧ ವಲಯಗಳ ಸಂಘಟನೆಗಳು ಒಂದೊಂದು ದಿನದ ಪೂಜೆಯಲ್ಲಿ ಪಾಲ್ಗೊಳ್ಳಲಿವೆ. ವಲಯವಾರು ಪೂಜೆ ಪ್ರತಿದಿನ ಸಂಜೆ 6ರಿಂದ ನಡೆಯಲಿದೆ. ಅಲ್ಲದೆ ನವರಾತ್ರಿಯ ಈ 9 ದಿನ ಪ್ರತಿನಿತ್ಯ ದುರ್ಗಾಪೂಜೆ, ಭಜನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಪೂಜೆಯಲ್ಲಿ ಭಾಗಿ ಆಗಲಿರುವ ವಲಯ ಸಂಘಟನೆಗಳು
- ಅ. 7, ಗುರುವಾರ: ಕೋಟ ವಲಯ
- ಅ. 8, ಶುಕ್ರವಾರ: ಬ್ರಹ್ಮಾವರ ವಲಯ
- ಅ. 9, ಶನಿವಾರ: ಶ್ರೀಮತಿ ಜಯಂತಿ ಮತ್ತು ಶ್ರೀವಾಸುದೇವ ಬೈಕಾಡಿ, ಅಧ್ಯಕ್ಷರು, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ, ಬಾರ್ಕೂರು.
- ಅ. 10, ರವಿವಾರ: ಬಾರ್ಕೂರು ವಲಯ
- ಅ. 11, ಸೋಮವಾರ: ಕೆಮ್ಮಣ್ಣು ವಲಯ
- ಅ. 12, ಮಂಗಳವಾರ: ತೆಂಕನಿಡಿಯೂರು ವಲಯ
- ಅ. 13, ಬುಧವಾರ: ಬೆಳಗ್ಗೆ 9 ಗಂಟೆಯಿಂದ ಚಂಡಿಕಾ ಹೋಮ
- ಅ. 14, ಗುರುವಾರ: ಉದ್ಯಾವರ ವಲಯ
- ಅ. 15, ಶುಕ್ರವಾರ: ಉಡುಪಿ ವಲಯ
ಸಂಬಂಧಿತ ಸುದ್ದಿ: ಬಾರ್ಕೂರು ದೇವಸ್ಥಾನದಲ್ಲಿ ಅ. 13ರಂದು ಸಾಮೂಹಿಕ ಚಂಡಿಕಾ ಹೋಮ
ಸಂಬಂಧಿತ ಸುದ್ದಿ: ನಾಳೆಯಿಂದ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಹಾಗೂ ದುರ್ಗಾಹೋಮ
ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು