ಬೆಂಗಳೂರು: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗಾಣಿಗ ಸಮಾಜಕ್ಕೆ ಸೇರಿದ ನಿವೇಶನದಲ್ಲಿ ಗಾಣದ ಕಣ್ಣಪ್ಪನವರ ಸಮಾಜ ಭವನ ನಿರ್ಮಾಣವಾಗಲಿದ್ದು, ಕಾಮಗಾರಿ ಆರಂಭಗೊಂಡಿದೆ.
ಕಟ್ಟಡ ಕಾಮಗಾರಿ ನಡೆಯುತ್ತಿರುವ ಗಾಣಿಗ ಸಮಾಜದ ನಿವೇಶನಕ್ಕೆ ಗಾಣಿಗ ಗುರುಪೀಠ ವನಶ್ರೀ ಸಂಸ್ಥಾನದ ಪೀಠಾಧಿಪತಿ ಶ್ರೀ ಡಾ. ಜಯಬಸವಕುಮಾರ ಸ್ವಾಮೀಜಿ ಇತ್ತೀಚೆಗೆ ಭೇಟಿ ನೀಡಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಸಂಗಣ್ಣಗೌಡ ಪಾಟೀಲ ಕಲ್ಲೂರ್, ಬಸವರಾಜಗೌಡ ಪಾಟೀಲ ಕುಕನೂರ, ಕಲಬುರಗಿ ಜಿಲ್ಲಾ ಗಾಣಿಗ ಸಮಾಜ ಅಧ್ಯಕ್ಷ ಶರಣಕುಮಾರ ಬಿಲ್ಲಾಡ, ಯುವ ಘಟಕದ ಗೌರವ ಅಧ್ಯಕ್ಷ ಸುನೀಲಕುಮಾರ ಸಜ್ಜನ, ಡಾ.ವಿಶ್ವನಾಥ ಬಿರಾದಾರ ಮಾಗಣಗೇರಾ, ರುದ್ರಗೌಡ ಪಾಟೀಲ ಯತ್ನಾಳ, ಬಸವರಾಜ ಅಂಗಡಿ, ವೀರೇಶ ಕಳಶೆಟ್ಟಿ, ವಿಠ್ಠಲ್ ಸಿದ್ದಣ್ಣನವರ, ದ್ಯಾಮಾ, ಸಂಜಯಕುಮಾರ ಪಾಟೀಲ, ಯುವ ಘಟಕದ ಸಿದ್ದು ಹಿರೆಗೌಡರ, ಮಹಾಂತೇಶ ಮದರಿ ಸೇರಿ ಗಾಣಿಗ ಸಮಾಜದ ಹಲವಾರು ಬಂಧುಗಳು ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..
ಸಂಬಂಧಿತ ಸುದ್ದಿ: ನಿಮಗೆ ಚುನಾವಣೆ ಗೆಲ್ಲಲು ಮೋದಿ ಹೆಸರು ಬೇಕು, ಗಾಣಿಗ ಸಮಾಜ ಬೇಡವೇ..?
ಸಂಬಂಧಿತ ಸುದ್ದಿ: ಕಿಕ್ ಬಾಕ್ಸಿಂಗ್ನಲ್ಲಿ ಗೆದ್ದ ಈ ಅವಳಿ ಸೋದರಿಯರು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ