ಬೆಂಗಳೂರು: ಸಫಲಿಗರ ಯಾನೆ ಗಾಣಿಗ ಸೇವಾ ಸಂಘ (ರಿ.), ಗಾಣಿಗರ ಯುವ ವೇದಿಕೆ ಮತ್ತು ಗಾಣಿಗರ ಮಹಿಳಾ ವೇದಿಕೆ ಮೂಡುಬಿದಿರೆ ಇದರ ಆಶ್ರಯದಲ್ಲಿ ಹಮ್ಮಿಕೊಂಡಿರುವ ಪಂದ್ಯಾವಳಿಗಳು ಇಂದು ಉದ್ಘಾಟನೆಗೊಂಡವು.
ದಿ. ಶ್ರೀಮತಿ ವಿಲಾಸಿನಿ ಮುರಳೀದಾಸ್ ಕಾವೂರು ಇವರ ಸ್ಮರಣಾರ್ಥ ಥ್ರೋಬಾಲ್ ಪಂದ್ಯಾಟ ಹಾಗೂ ದಿ. ರಾಜು ಬಿ. ಪುತ್ರನ್ ಸ್ಮರಣಾರ್ಥ ಏರ್ಪಡಿಸಿರುವ ವಾಲಿಬಾಲ್ – ಶಟ್ಲ್ ಪಂದ್ಯಾಟ-2022 ಕ್ರೀಡಾಕೂಟವನ್ನು ಶಾಸಕ ಉಮಾನಾಥ್ ಕೋಟ್ಯಾನ್ ಇಂದು ಉದ್ಘಾಟಿಸಿದರು.
ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆಯ ಶ್ರೀಧವಳ ಕಾಲೇಜಿನಲ್ಲಿ ಈ ಪಂದ್ಯಾವಳಿ ನಡೆಯುತ್ತಿದ್ದು, ಗಾಣಿಗ ಸಮಾಜದ ಹಲವಾರು ಮಂದಿ ಈ ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.
ಸಂಬಂಧಿತ ಸುದ್ದಿ: ಬಾಲ್ ಬ್ಯಾಡ್ಮಿಂಟನ್ ಪ್ರತಿಭೆ ಜಯಲಕ್ಷ್ಮಿಗೆ ಕ್ರೀಡಾರತ್ನ ಪ್ರಶಸ್ತಿ ಪ್ರದಾನ
ಸಂಬಂಧಿತ ಸುದ್ದಿ: ರಾಷ್ಟ್ರಮಟ್ಟದ ಕ್ರೀಡಾಪಟು ಜಯಲಕ್ಷ್ಮಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!