Saturday, September 21, 2024
spot_img
More

    Latest Posts

    ತಾಲೂಕು ಗಾಣಿಗರ ಸಂಘದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ

    ಬೆಂಗಳೂರು: ಭದ್ರಾವತಿ ತಾಲೂಕು ಗಾಣಿಗರ ಸಂಘವು ಶ್ರೀವರಸಿದ್ಧಿ ಮಹಾಗಣಪತಿ, ಶ್ರೀಸುಬ್ರಹ್ಮಣ್ಯ ನಾಗದೇವಸ್ಥಾನ ಸೇವಾಸಮಿತಿ ಸಹಯೋಗದೊಂದಿಗೆ ಭದ್ರಾವತಿಯ ಹೊಸ ಬುಳ್ಳಾಪುರದಲ್ಲಿ ಪೂಜೆ ಹಾಗೂ ಪುರಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

    ಆಗಸ್ಟ್‌ 14ರಂದು ನಡೆದ ಈ ಸಮಾರಂಭದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಗಾಣಿಗ ಸಮಾಜದ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾಯಿತು.

    ಭದ್ರಾವತಿ ಶಾಸಕ ಸಂಗಮೇಶ್‌ ಅವರೊಂದಿಗೆ ಯತೀಶ್‌ ಗಾಣಿಗ, ಆನಂದ್‌ ಕೆ. ಮಂಡ್ಯ.

    ಈ ಸಮಾರಂಭದಲ್ಲಿ ಭದ್ರಾವತಿ ಶಾಸಕ ಸಂಗಮೇಶ್‌, ಗಾಣಿಗ ಸಮಾಜದ ಮುಖಂಡರಾದ ಯತೀಶ್‌ ಗಾಣಿಗ, ಆನಂದ ಕೆ. ಮಂಡ್ಯ, ಅಯ್ಯಪ್ಪ ಮಂಡ್ಯ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದು, ಭದ್ರಾವತಿ ಸುತ್ತಮುತ್ತಲ ಪರಿಸರದ ಗಾಣಿಗ ಸಮಾಜ ಬಾಂಧವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

    ಭದ್ರಾವತಿ ಶಾಸಕ ಸಂಗಮೇಶ್‌ ಅವರೊಂದಿಗೆ ಗಾಣಿಗ ಸಮಾಜ ಬಾಂಧವರು
    ಭದ್ರಾವತಿ ಶಾಸಕ ಸಂಗಮೇಶ್‌ ಅವರೊಂದಿಗೆ ಗಾಣಿಗ ಸಮಾಜ ಬಾಂಧವರು
    ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು
    ಸಮಾರಂಭದಲ್ಲಿ ನೆರೆದಿದ್ದ ಸಮಾಜಬಾಂಧವರು.

    ಸಂಬಂಧಿತ ಸುದ್ದಿ: ಗಾಣಿಗ ಯುವ ಬಳಗದಿಂದ ಪ್ರತಿಭಾ ಪುರಸ್ಕಾರ, ಸ್ನೇಹಿತರ ದಿನಾಚರಣೆ

    ಸಂಬಂಧಿತ ಸುದ್ದಿ: ಎಸ್‌ಜಿಇಸಿಟಿ-ಆಸ್ರಾದಿಂದ ನಡೆಯಿತು ಗ್ರಾಹಕ ಜಾಗೃತಿ ಕಾರ್ಯಕ್ರಮ

    ಸಂಬಂಧಿತ ಸುದ್ದಿ: ಮಹಾರಾಷ್ಟ್ರದ ಕ್ರಿಕೆಟ್ ಕ್ಷೇತ್ರದಲ್ಲಿ ‘ಯಶಸ್’ ಸಾಧಿಸುತ್ತಿರುವ ‘ಗಾಣಿಗ ಬ್ರಿಲಿಯಂಟ್’

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!