ಬೆಂಗಳೂರು: ಉಡುಪಿ ಜಿಲ್ಲೆ ಕುಂದಾಪುರದ ರೋಟರಿ ಕ್ಲಬ್ ರಿವರ್ಸೈಡ್ನ 2022-23ನೇ ಸಾಲಿನ ಅಧ್ಯಕ್ಷರಾಗಿ ಕೆ.ಎಸ್. ಮಂಜುನಾಥ್ ಅವರು ಆಯ್ಕೆ ಆಗಿದ್ದಾರೆ.
ಶಿಕ್ಷಕರಾಗಿರುವ ಇವರು ಬಸ್ರೂರು ಹಿಂದೂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಉತ್ತಮ ಕ್ರೀಡಾಪಟುಗಳನ್ನು ಕೂಡ ಇವರು ರೂಪಿಸಿದ್ದಾರೆ.
ಅಲ್ಲದೆ ಹಲವಾರು ಸಂಘ-ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಗಾಣಿಗ ಸಮುದಾಯದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಸೋಮಕ್ಷತ್ರಿಯ ಗಾಣಿಗ ಸಮಾಜದಲ್ಲಿ ಕ್ರಿಯಾಶೀಲರಾಗಿರುವ ಇವರು ಗಾಣಿಗ ಪ್ರಕಾಶನದ ʼಸಂಪರ್ಕ ಸುಧಾʼ ಚಟುವಟಿಕೆಯಲ್ಲೂ ತೊಡಗಿಕೊಂಡಿದ್ದಾರೆ.
ಕುಂದಾಪುರದ ವ್ಯಾಸರಾಜ ಮಠದಲ್ಲಿ ಯುವಕ ಸಂಘದ ಮೂಲಕ ಗಣೇಶೋತ್ಸವ ಪ್ರಾರಂಭಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ. ಈಗ ರೋಟರಿ ರಿವರ್ಸೈಡ್ ಅಧ್ಯಕ್ಷರಾಗಿರುವ ಇವರಿಂದ ಇನ್ನಷ್ಟು ಸಾಮಾಜಿಕ ಕಾರ್ಯಗಳು ನಡೆಯಲಿ ಎಂದು ಗ್ಲೋಬಲ್ ಗಾಣಿಗ.ಕಾಂ ಹಾರೈಸುತ್ತಿದೆ.
ಸಂಬಂಧಿತ ಸುದ್ದಿ: ಕೊಗ್ಗ ಮಾಸ್ಟರ್ ಎಂದೇ ಹೆಸರಾಗಿದ್ದ ಕೊಗ್ಗ ಗಾಣಿಗರು ನಿಧನ..
ಸಂಬಂಧಿತ ಸುದ್ದಿ: ಸಂಭ್ರಮ-ಸಾಧನೆ-ಸಂವಾದದಿ ಮೇಳೈಸಿತು ʼಸಂಪರ್ಕ ಸುಧಾʼ ರಜತ ಮಹೋತ್ಸವ
ಸಂಬಂಧಿತ ಸುದ್ದಿ: ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ-ಅಧ್ಯಕ್ಷರಾಗಿ ಮಂಜುನಾಥ-ನರಸಿಂಹ ಅವಿರೋಧ ಆಯ್ಕೆ