ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜದ ಕುಲಗುರುಗಳಾದ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದಂಗಳವರನ್ನು ಕುಮಟಾ ಗಾಣಿಗ ಯುವ ಬಳಗದ ಸದಸ್ಯರು ಭೇಟಿಯಾಗಿ ದರ್ಶನ ಪಡೆದರು. ಸ್ವಾಮೀಜಿಯವರು ಸಮಾಜಬಾಂಧವರಿಗೆ ಆಶೀರ್ವದಿಸಿ ಶುಭ ಹಾರೈಸಿದರು.
ಕುಂದಾಪುರದ ವಡೇರಹೋಬಳಿ ಶ್ರೀ ವ್ಯಾಸರಾಜ ಸಂಸ್ಥಾನದ ಶ್ರೀಲಕ್ಷ್ಮೀಂದ್ರ ತೀರ್ಥರು ಚನ್ನಪಟ್ಟಣ ತಾಲೂಕಿನ ಅಬ್ಬೂರು ಮಠದಲ್ಲಿ ಚಾತುರ್ಮಾಸ ವ್ರತಾಚರಣೆಯಲ್ಲಿದ್ದಾರೆ. ಅಲ್ಲಿಗೆ ತೆರಳಿದ ಯುವ ಬಳಗದ ಸದಸ್ಯರು ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಗುರುಗಳು ಯುವ ಬಳಗದ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ಯುವ ಬಳಗ ಮುಂದಿನ ದಿನಗಳಲ್ಲಿ ಸಮಾಜದ ಪರವಾಗಿ ಇನ್ನಷ್ಟು ಸೇವೆ ಮಾಡುವಂತಾಗಲಿ ಎಂದು ಆಶೀರ್ವದಿಸಿದರು. ಯುವ ಬಳಗದ ಸದಸ್ಯರು ಮಠಕ್ಕೆ ಆಗಮಿಸಿದ್ದಕ್ಕೆ ಶ್ರೀಗಳು ಸಂತೋಷ ವ್ಯಕ್ತಪಡಿಸಿದರು. ಬಳಗದ ವತಿಯಿಂದ ಶ್ರೀಗಳಿಗೆ ಗುರುಕಾಣಿಕೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಯುವ ಬಳಗದ ಗೌರವಾಧ್ಯಕ್ಷ ಗಣಪತಿ ಶೆಟ್ಟಿ, ಅಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಯುವ ಬಳಗದ ಪ್ರಮುಖರಾದ ಗೌತಮ ಶೆಟ್ಟಿ, ಗಣೇಶ್ ಶೆಟ್ಟಿ, ದತ್ತು ಶೆಟ್ಟಿ ಶಶಾಂಕ್ ಶೆಟ್ಟಿ ಮುಂತಾದವರು ಹಾಜರಿದ್ದು ಗುರುಗಳ ದರ್ಶನ-ಆಶೀರ್ವಾದ ಪಡೆದರು.
ಸಂಬಂಧಿತ ಸುದ್ದಿ: ಕುಂದಾಪುರ ರೋಟರಿ ಕ್ಲಬ್ ರಿವರ್ಸೈಡ್ ಅಧ್ಯಕ್ಷರಾಗಿ ಕೆ.ಎಸ್. ಮಂಜುನಾಥ್ ಆಯ್ಕೆ
ಸಂಬಂಧಿತ ಸುದ್ದಿ: ಕೊಗ್ಗ ಮಾಸ್ಟರ್ ಎಂದೇ ಹೆಸರಾಗಿದ್ದ ಕೊಗ್ಗ ಗಾಣಿಗರು ನಿಧನ..
ಸಂಬಂಧಿತ ಸುದ್ದಿ: ಗಾಣಿಗ ಸಮುದಾಯದಲ್ಲೊಬ್ಬ ʼಶಾನ್ದಾರ್ʼ ಈಜುಪಟು..