Friday, May 17, 2024
spot_img
More

    Latest Posts

    ನೇರ ನೇಮಕಾತಿಗೆ ಅರ್ಜಿ ಆಹ್ವಾನ, ನಾಡಿದ್ದೇ ಕೊನೆಯ ದಿನ..

    ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಗುರುಪುರ-ಕೈಕಂಬದ ಸಫಲ ಸೌಹಾರ್ದ ಸಹಕಾರಿ ಸಂಘ ನಿಯಮಿತವು ಸಹಕಾರಿಯ ಉಪವಿಧಿಗಳಿಗೆ, ನೇಮಕಾತಿ ನಿಯಮಗಳಿಗೆ, ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997 ಹಾಗೂ ನಿಯಮಗಳು 2004 ಉಪಬಂಧಗಳಿಗೆ ಒಳಪಟ್ಟು 8 ಗುಮಾಸ್ತ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ.

    ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ವಯೋಮಿತಿಯ, ಪದವಿಯಲ್ಲಿ ಕನಿಷ್ಠ ಶೇ. 50 ಅಂಕ ಪಡೆದ ಕನ್ನಡ ಬರೆಯಲು, ಓದಲು, ಮಾತನಾಡಲು ಬಲ್ಲ, ಕನ್ನಡದಲ್ಲಿ ಬೆರಳಚ್ಚು ಗೊತ್ತಿರುವ, ಕಂಪ್ಯೂಟರ್ ಪರಿಜ್ಞಾನ ಉಳ್ಳವರು ಅರ್ಜಿ ಸಲ್ಲಿಸಬಹುದು.

    ಅರ್ಜಿದಾರರು ಕರ್ನಾಟಕ ರಾಜ್ಯದ ಕಾನೂನು ರೀತ್ಯಾ ಸ್ಥಾಪಿತವಾಗಿರುವ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದವರಾಗಿರಬೇಕು. ಸಹಕಾರಿ ವಿಷಯದಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಆದ್ಯತೆ ನೀಡಲಾಗುವುದು.

    ಆಸಕ್ತರು ಸಹಕಾರಿಯ ಪ್ರಧಾನ ಕಚೇರಿಗೆ 50 ರೂಪಾಯಿ ಪಾವತಿಸಿ ಅರ್ಜಿ ನಮೂನೆ ಪಡೆದು, ನಿಗದಿತ ಶುಲ್ಕವಾದ 300 ರೂಪಾಯಿ ಮೌಲ್ಯದ ಡಿಡಿ/ಪೋಸ್ಟಲ್ ಆರ್ಡರ್‌ ಸಫಲ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಗುರುಪುರ-ಕೈಕಂಬ ಇವರಿಗೆ ಸ್ಥಳದಲ್ಲಿ ಸಂದಾಯವಾಗುವಂತೆ ಪಡೆದು, ದಾಖಲಾತಿಯ ನಕಲು ಪ್ರತಿಗಳೊಂದಿಗೆ ಅ.29ರ ಒಳಗೆ ತಲುಪುವಂತೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 0824 2951271 ಸಂಪರ್ಕಿಸಬಹುದು.

    ಸಂಬಂಧಿತ ಸುದ್ದಿ: ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ 108 ದಿನಗಳ ಸಂಧ್ಯಾ ಭಜನೆಗೆ ಚಾಲನೆ

    ಸಂಬಂಧಿತ ಸುದ್ದಿ:ರಾಜ್ಯೋತ್ಸವ ಕೊಡುಗೆ: ಗಾಣಿಗ ಸಮಾಜದ ವಿದ್ಯಾರ್ಥಿಗಳಿಗಿಲ್ಲಿ ಕಂಪ್ಯೂಟರ್‌ ಕೋರ್ಸ್‌ ಉಚಿತ

    ಸಂಬಂಧಿತ ಸುದ್ದಿ: ಗೋಕರ್ಣ ದೇವಸ್ಥಾನದಲ್ಲಿ ಗಾಣಿಗ ಸಮಾಜದವರಿಂದ ಪ್ರಪ್ರಥಮ ಕಾರ್ತಿಕ ಪೂಜೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!