ಬೆಂಗಳೂರು: ಶಿವಮೊಗ್ಗದಲ್ಲಿರುವ ಮಾನಸ ಇಂಟರ್ನ್ಯಾಷನಲ್ ಐಸಿಎಸ್ಇ ಸ್ಕೂಲ್ನ ನೂತನ ಕಟ್ಟಡ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಜೊತೆಗೆ ಮತ್ತೊಂದು ಹೊಸ ಕಟ್ಟಡಕ್ಕೆ ಶಿಲಾನ್ಯಾಸ, ಇಸ್ರೋ ಗ್ರ್ಯಾವಿಟಿ ಸೈನ್ಸ್ ಫೌಂಡೇಷನ್ ಉದ್ಘಾಟನೆಯೂ ಇದೇ ಸಂದರ್ಭದಲ್ಲಿ ನೆರವೇರಿತು.
ಶಿವಮೊಗ್ಗದಲ್ಲಿ ಮೇ 22ರಂದು ನಡೆದ ಈ ಕಾರ್ಯಕ್ರಮದಲ್ಲಿ ತೈಲೇಶ್ವರ ಗಾಣಿಗ ಮಹಾಸಂಸ್ಥಾನದ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ಅವರು ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿದರು.
ಮಾನಸ ಇಂಟರ್ನ್ಯಾಷನಲ್ ಸ್ಕೂಲ್ ಇಸ್ರೋ ಗ್ರಾವಿಟಿ ಸೈನ್ಸ್ ಫೌಂಡೇಷನ್ ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದ್ದು, ಇದಕ್ಕೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಈ ಫೌಂಡೇಷನ್ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಅನುಕೂಲಕರವಾಗಿ ಪರಿಣಮಿಸಲಿದ್ದು, ಅವರ ಶೈಕ್ಷಣಿಕ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಮಾನಸ ಇಂಟರ್ನ್ಯಾಷನಲ್ ಐಸಿಎಸ್ಇ ಸ್ಕೂಲ್ ಅಧ್ಯಕ್ಷ ಎಚ್.ಸುಬ್ಬಯ್ಯ, ಕಾರ್ಯದರ್ಶಿ ಎಸ್.ಜನಾರ್ದನ್, ಖಜಾಂಚಿ ಎಚ್.ಶಿವರಾಮ ಗಾಣಿಗ, ಮಾನಸ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಟಿ.ನರಸಿಂಹ, ಟ್ರಸ್ಟ್ ಸದಸ್ಯರಾದ ಜಿ.ಎಸ್. ಅಣ್ಣಪ್ಪಯ್ಯ, ಎ.ಎಚ್.ಅಚ್ಯುತ, ಸೂರ್ಯನಾರಾಯಣ ಗಾಣಿಗ, ಯು.ಸುರೇಶ್ ಕುಮಾರ್, ಉದ್ಯಮಿಗಳಾದ ಮಂಜುನಾಥ್ ಗಾಣಿಗ ಸೇಲಂ, ಶಿವಾನಂದ ಗಾಣಿಗ, ಕುಂದಾಪುರ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಕುಂಭಾಶಿ ಮುಂತಾದವರು ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..
ಸಂಬಂಧಿತ ಸುದ್ದಿ: ಯುವ ಮಾನಸ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವಿಧ್ಯುಕ್ತ ಉದ್ಘಾಟನೆ
ಸಂಬಂಧಿತ ಸುದ್ದಿ: ಸಮಾಜದ ಯುವಕರು ಅತ್ಯುನ್ನತ ಹುದ್ದೆ ಅಲಂಕರಿಸಲಿ: ಶಾಸಕ ದಿನಕರ ಶೆಟ್ಟಿ