ಬೆಂಗಳೂರು: ಗದಗದಲ್ಲಿ ಅ.15-16ರಂದು ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ನರೇಗಲ್ ಪಟ್ಟಣದ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಕುಸ್ತಿಪಟು ಪೂಜಾ ಗಾಣಿಗೇರ ತೃತೀಯ ಸ್ಥಾನ ಗಳಿಸಿದ್ದಾರೆ.
ಈ ಮೂಲಕ ಇವರು ಊರವರು ಮತ್ತು ಮಹಾವಿದ್ಯಾಲಯದವರು ಹೆಮ್ಮೆಪಡುವಂಥ ಸಾಧನೆ ಮಾಡಿದ್ದು, ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಲಕೆರೆಯ ಕೀರ್ತಿಮುಪ್ಪಿನ ಬಸವಲಿಂಗ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.
ಆಡಳಿತಾಧಿಕಾರಿ ಗೌಡರ, ಮಹಾವಿದ್ಯಾಲಯದ ಪ್ರಾಚಾರ್ಯ ವೈ.ಸಿ. ಪಾಟೀಲ, ಜಮಖಾನಾ ವಿಭಾಗದ ಮುಖ್ಯಸ್ಥ ಜಿ. ಎಸ್. ಮಠಪತಿ, ಉಪನ್ಯಾಸಕರಾದ ಪಿ.ಎನ್. ಬಳೂಟಗಿ, ಎ. ಎಂ. ನದಾಫ, ಎಫ್.ಎನ್. ಹುಡೇದ, ಪಿ.ವೈ. ಕರಮುಡಿ, ಸುಮಾ ಪಾಟೀಲ, ಲೀಲಾ ಹನಮಣ್ಣನವರ, ಸುಜಾತಾ ಕೊತಬಾಳ ಹಾಗೂ ಸಮಸ್ತ ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿದ್ದಾರೆ.
ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್ ಪದವಿ
ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ
ಸಂಬಂಧಿತ ಸುದ್ದಿ: ಟೀಮ್ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ