ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿನ ಶ್ರೀಜ್ಯೋತಿ ಸಮುದಾಯ ಭವನ ಜೀರ್ಣೋದ್ಧಾರಕ್ಕೆ ಹತ್ತು ಲಕ್ಷ ರೂಪಾಯಿ ಧನಸಹಾಯ ದೇಣಿಗೆಯಾಗಿ ಬಂದಿದೆ.
ಮುಧೋಳ ತಾಲೂಕು ಗಾಣಿಗ ಸಮಾಜ ಸೇಮಾಭಿವೃದ್ಧಿ ಸಂಘದ ವತಿಯಿಂದ ಮುಧೋಳ ಮಹಾನಗರದಲ್ಲಿ ಶ್ರೀಜ್ಯೋತಿ ಸಮುದಾಯ ಭವನದ ಜೀರ್ಣೋದ್ಧಾರ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಈ ಜೀರ್ಣೋದ್ಧಾರ ಕಾರ್ಯಕ್ಕೆ ಮುಧೋಳದ ಕಲ್ಲಪ್ಪ ಶಂಕ್ರಪ್ಪ ಗಡ್ಡಿ ಅವರು ಐದು ಲಕ್ಷ ರೂ. ಹಾಗೂ ಅಶೋಕ ಶಂಕ್ರಪ್ಪ ಗಡ್ಡಿ ಅವರು ಐದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಹೀಗೆ ಮುಧೋಳದ ಗಡ್ಡಿ ಪರಿವಾರದ ಈ ಎರಡು ಕುಟುಂಬದವರಿಂದ ಹತ್ತು ಲಕ್ಷ ರೂ. ಧನಸಹಾಯ ಬಂದಿದೆ.
ಶ್ರೀಜ್ಯೋತಿ ಸಮುದಾಯ ಭವನ ಜೀರ್ಣೋದ್ಧಾರ ಕುರಿತ ಈ ಧನಸಹಾಯವನ್ನು ಈ ಕುಟುಂಬದವರು ಇತ್ತೀಚೆಗೆ ಚೆಕ್ ಮೂಲಕ ಹಸ್ತಾಂತರಿಸಿದರು. ಗಡ್ಡಿ ಪರಿವಾರದ ಈ ಎರಡು ಕುಟುಂಬಕ್ಕೆ ಮುಧೋಳ ತಾಲೂಕಿನ ಗಾಣಿಗ ಸಮಾಜದ ಪರವಾಗಿ ಸಂಘವು ಕೃತಜ್ಞತೆಗಳನ್ನು ಸಲ್ಲಿಸಿದೆ.
ಸಂಬಂಧಿತ ಸುದ್ದಿ: ಟೀಮ್ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ
ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ
ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು