ಬೆಂಗಳೂರು: ಗಾಣಿಗ ಮಹಾಸಭಾ (ರಿ.) 2024ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಮೈಸೂರಿನ ಪತ್ರಕರ್ತರ ಭವನದಲ್ಲಿ ಜ. 12ರಂದು ಈ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದೆ.
ಪ್ರದೇಶ ಕಾಂಗ್ರೆಸ್ ಸಮಿತಿಯ ಎಸ್ಸಿ ಘಟಕದ ಅಧ್ಯಕ್ಷ ಧರ್ಮಸೇನ ಅವರು ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಡಾ.ಕೆ.ವಿಜಯಕುಮಾರ್ (ರೈಲ್ವೆ) ವಹಿಸಿದ್ದರು.
ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ಎ.ಸಿ. ಪೂರ್ಣಚಂದ್ರ, ಸಮಶ್ರೀ ಎಜುಕೇಷನಲ್ ಆ್ಯಂಡ್ ಕಲ್ಚರ್ ಟ್ರಸ್ಟ್ ಅಧ್ಯಕ್ಷೆ ಸಿ.ಕೆ.ಸುಮಾ, ನಾಯಕ ಸಮಾಜದ ಅಧ್ಯಕ್ಷ ನಾಗಲಿನಪ್ಪ ಭಾಗವಹಿಸಿದ್ದರು.
ಗಾಣಿಗ ಸಮಾಜದ ಮುಖಂಡರಾದ ಕೆ.ಆರ್. ಕ್ಷೇತ್ರದ ರಾಜಶೇಖರ್, ನಾರಾಯಣ್, ಗಜೇಂದ್ರ (ರೈಲ್ವೆ), ಪುಟ್ಟಸ್ವಾಮಿ, ರವಿ, ಪುರುಷೋತ್ತಮ್, ಹೆಬ್ಬೆ ಮಹೇಶ್, ಕಾರ್ಯದರ್ಶಿ ಮಹಾದೇವ್ ಗಾಣಿಗ, ರವಿಚಂದ್ರ, ಅನಿತಾ ಕುಮಾರಿ ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ಗಾಣಿಗ ಹಿತೈಷಿಗಳ ಬಳಗದ ಕ್ಯಾಲೆಂಡರ್ ಬಿಡುಗಡೆ
ಸಂಬಂಧಿತ ಸುದ್ದಿ: ಕರ್ನಾಟಕ ಜಾನಪದ ಪರಿಷತ್ ಕಲಬುರಗಿ ಘಟಕದಿಂದ ಸಚಿವರಿಗೆ ಮನವಿ
ಸಂಬಂಧಿತ ಸುದ್ದಿ: ಟೀಮ್ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ