ಬೆಂಗಳೂರು: ಜನ್ಮದಿನದ ಶುಭಾಶಯ ಕೋರುವವರೇ ಅದನ್ನು ಆಚರಿಸಿಕೊಳ್ಳುತ್ತಿರುವವರಿಗೆ ಉಡುಗೊರೆ ಕೊಟ್ಟು ಹಾರೈಸುವುದು ಸರ್ವೇಸಾಮಾನ್ಯ. ಆದರೆ ಇಲ್ಲಿ ಜನ್ಮದಿನದ ಶುಭಾಶಯ ಕೋರಲು ಬಂದವರಿಗೇ ಶಾಸಕರಿಂದ ಉಡುಗೊರೆ ಸಿಕ್ಕಿದೆ. ಹೀಗೊಂದು ಗಿಫ್ಟ್ ಕೊಟ್ಟವರು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಕೆ. ಶೆಟ್ಟಿ.
ಜುಲೈ 21ರಂದು ಶಾಸಕರ ಜನ್ಮದಿನವಿದ್ದು, ಅವರಿಗೆ ಶುಭ ಕೋರಲೆಂದು ಕುಮಟಾ ಗಾಣಿಗ ಯುವ ಬಳಗ ಶಾಸಕರಲ್ಲಿಗೆ ತೆರಳಿತ್ತು. ಗಾಣಿಗ ಯುವ ಬಳಗದ ಸದಸ್ಯರು ಶಾಸಕರನ್ನು ಭೇಟಿಯಾಗಿ, ಜನ್ಮದಿನದ ಶುಭಾಶಯವನ್ನು ಕೋರಿದ್ದಾರೆ. ಬಳಿಕ ಶಾಸಕ ದಿನಕರ ಕೆ. ಶೆಟ್ಟಿ ಅವರು ತಮ್ಮ ಜನ್ಮದಿನದ ಸಂಭ್ರಮದ ಸಂದರ್ಭದಲ್ಲಿ ಗಾಣಿಗ ಯುವ ಬಳಗದ ನಿಧಿಗೆ 20,000 ರೂಪಾಯಿ ಮೊತ್ತವನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಮೂಲಕ ಕುಮಟಾ ಗಾಣಿಗ ಯುವ ಬಳಗದ ಕೆಲಸಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿ ಬೆಂಬಲ ಸೂಚಿಸಿದ್ದಾರೆ ಎಂಬುದಾಗಿ ಬಳಗದ ಸದಸ್ಯರು ತಿಳಿಸಿದ್ದಾರೆ.
ಸಂಬಂಧಿತ ಸುದ್ದಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗಾಣಿಗ ಸಮಾಜದ ವಿದ್ಯಾರ್ಥಿಗಳು
ಸಂಬಂಧಿತ ಸುದ್ದಿ: ಅಖಿಲ ಭಾರತ ಗಾಣಿಗ ಸಂಘದಿಂದ ಬಿ.ಎಸ್. ಯಡಿಯೂರಪ್ಪ ಅವರಿಗೆ ಬೆಂಬಲ