ಬೆಂಗಳೂರು: ತೆಂಗಿನೆಣ್ಣೆಯ ಮಹತ್ವ ಸಾರುವ ನಿಟ್ಟಿನಲ್ಲಿ ಪ್ರಬಂಧ ಮಂಡಿಸಿರುವ ಆರ್.ಎಂ. ಪ್ರಸಾದ್ ಅವರಿಗೆ ಡಾಕ್ಟರೇಟ್ ಲಭಿಸಿದೆ.
ಆರ್.ಎಂ. ಪ್ರಸಾದ್ ಅವರಿಗೆ ಮಂಗಳೂರಿನ ಯೆನಪೋಯ ಡೀಮ್ಡ್ ಯುನಿವರ್ಸಿಟಿ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ‘ನ್ಯೂಟ್ರಿಷನಲ್ ರೋಲ್ ಆಫ್ ಕೋಕೋನಟ್ ಆಯಿಲ್’ ಎಂಬ ವಿಷಯದ ಮೇಲೆ ಇವರು ಪ್ರಬಂಧ ಮಂಡಿಸಿದ್ದರು. ತೆಂಗಿನೆಣ್ಣೆಯಲ್ಲಿನ ಪೌಷ್ಟಿಕಾಂಶಗಳ ಕುರಿತಾಗಿ ಅಧ್ಯಯನ ನಡೆಸಿ ಈ ಪ್ರಬಂಧದಲ್ಲಿ ವಿವರಿಸಲಾಗಿದೆ.
ಮಂಗಳೂರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋಲಾಜಿ ಪ್ರೊಫೆಸರ್ ಉರ್ಬನ್ ಡಿ’ಪಲಸೋಜ ಹಾಗೂ ಯೆನೆಪೋಯ ಮೆಡಿಕಲ್ ಕಾಲೇಜಿನಲ್ಲಿ ಫಿಸಿಯೋಲಜಿ ಪ್ರೊಫೆಸರ್ ಆಗಿದ್ದ ಶಂಕರ್ ಭಟ್ ಅವರು ಪ್ರಸಾದ್ ಅವರಿಗೆ ಮಾರ್ಗದರ್ಶನ ಮಾಡಿದ್ದರು.
ಆರ್.ಎಂ. ಪ್ರಸಾದ್ ಅವರು ರವೀಂದ್ರ ಮಂಜೇಶ್ವರ ಮತ್ತು ಗಿರಿಜಾ ಬಾಳಿಕೆ ದಂಪತಿಯ ಪುತ್ರ.
ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..
ಸಂಬಂಧಿತ ಸುದ್ದಿ: ನಮ್ಮದು ಸಣ್ಣ ಸಮಾಜ, ಕಡಿಮೆ ಜನಸಂಖ್ಯೆ ಎಂಬ ಭಾವನೆ ಬೇಡ; ಗಾಣಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆ
ಸಂಬಂಧಿತ ಸುದ್ದಿ: ನೂತನ ಸಂಪುಟ ರಚನೆ ಬೆನ್ನಿಗೇ ಮತ್ತಷ್ಟು ಕ್ರಿಯಾಶೀಲರಾದ್ರು ಶಾಸಕ ದಿನಕರ ಶೆಟ್ಟಿ