ಬೆಂಗಳೂರು: ಅಗಲಿರುವ ಪವರ್ಸ್ಟಾರ್ ಪುನೀತ್ ರಾಜಕುಮಾರ್ಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಅಭಿಮಾನ ಸಲ್ಲಿಸಿದ್ದಾರೆ. ಅದರಲ್ಲೂ ಇಲ್ಲೊಬ್ಬರು ಅಭಿಮಾನಿ 600 ಕಿಲೋಮೀಟರ್ ದೂರದಿಂದ ಸೈಕಲ್ನಲ್ಲೇ ಬಂದು ಪುನೀತ್ ರಾಜಕುಮಾರ್ ಸಮಾಧಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಹೀಗೆ ಅಪ್ಪುಗೆ ಅಭಿಮಾನದ ಶ್ರದ್ಧಾಂಜಲಿ ಸಲ್ಲಿಸಲು ಬಂದ ಅಭಿಮಾನಿಯ ಹೆಸರು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದ ರಾಘವೇಂದ್ರ ಗಾಣಿಗೇರ. ಸೈಕಲ್ನ ಹಿಂದೆ-ಮುಂದೆ ಪುನೀತ್ ರಾಜಕುಮಾರ್ ಭಾವಚಿತ್ರ ಇಟ್ಟುಕೊಂಡು, ಸೈಕಲ್ಗೆ ಕನ್ನಡ ಧ್ವಜ ಕಟ್ಟಿಕೊಂಡು ಬಾಗಲಕೋಟೆಯಿಂದ ಬೆಂಗಳೂರಿಗೆ ಬಂದು ಇವರು ತಮ್ಮ ಅಭಿಮಾನಪೂರ್ವಕ ನಮನಗಳನ್ನು ಸಲ್ಲಿಸಿ ತೆರಳಿದ್ದಾರೆ.
ಪುನೀತ್ ರಾಜಕುಮಾರ್ ಅವರು ಮೃತಪಟ್ಟ ದಿನವೇ ಬಂದು ಅಂತಿಮದರ್ಶನ ಪಡೆಯಬೇಕು ಎಂದು ಇವರು ಅಂದುಕೊಂಡಿದ್ದರೂ ಅನಾರೋಗ್ಯದ ಕಾರಣ ಆಗಿರಲಿಲ್ಲ. ಕೊನೆಗೂ ಇತ್ತೀಚೆಗೆ ಅವರು ಹುನಗುಂದ, ಇಳಕಲ್ , ಚಿತ್ರದುರ್ಗ ಮಾರ್ಗವಾಗಿ ಇವರು ಬೆಂಗಳೂರಿಗೆ ಬಂದು ಸಮಾಧಿಯ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸಂಬಂಧಿತ ಸುದ್ದಿ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದ ನಡೆಯಿತು ಕಾರ್ತಿಕ ಮಾಸದ ಪ್ರಥಮ ಪೂಜೆ
ಸಂಬಂಧಿತ ಸುದ್ದಿ: ‘ಎಡಗೈ’ಗೆ ಹಣ ಹಾಕಿದ ಗುರುದತ್ ಗಾಣಿಗ; ‘ಅಪಘಾತ’ಕ್ಕೆ ಕಾರಣವನ್ನೂ ಬಿಚ್ಚಿಟ್ಟರು..
ಸಂಬಂಧಿತ ಸುದ್ದಿ: ಬೇವು-ಬೆಲ್ಲದ ಜೊತೆ ಮನ(ನು)ರಂಜಿಸಿದ ಟೀಸರ್