ಬೆಂಗಳೂರು: ಭದ್ರಾವತಿ ತಾಲೂಕು ಗಾಣಿಗರ ಸಂಘವು ಶ್ರೀವರಸಿದ್ಧಿ ಮಹಾಗಣಪತಿ, ಶ್ರೀಸುಬ್ರಹ್ಮಣ್ಯ ನಾಗದೇವಸ್ಥಾನ ಸೇವಾಸಮಿತಿ ಸಹಯೋಗದೊಂದಿಗೆ ಭದ್ರಾವತಿಯ ಹೊಸ ಬುಳ್ಳಾಪುರದಲ್ಲಿ ಪೂಜೆ ಹಾಗೂ ಪುರಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಆಗಸ್ಟ್ 14ರಂದು ನಡೆದ ಈ ಸಮಾರಂಭದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಗಾಣಿಗ ಸಮಾಜದ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಭದ್ರಾವತಿ ಶಾಸಕ ಸಂಗಮೇಶ್, ಗಾಣಿಗ ಸಮಾಜದ ಮುಖಂಡರಾದ ಯತೀಶ್ ಗಾಣಿಗ, ಆನಂದ ಕೆ. ಮಂಡ್ಯ, ಅಯ್ಯಪ್ಪ ಮಂಡ್ಯ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದು, ಭದ್ರಾವತಿ ಸುತ್ತಮುತ್ತಲ ಪರಿಸರದ ಗಾಣಿಗ ಸಮಾಜ ಬಾಂಧವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸಂಬಂಧಿತ ಸುದ್ದಿ: ಗಾಣಿಗ ಯುವ ಬಳಗದಿಂದ ಪ್ರತಿಭಾ ಪುರಸ್ಕಾರ, ಸ್ನೇಹಿತರ ದಿನಾಚರಣೆ
ಸಂಬಂಧಿತ ಸುದ್ದಿ: ಎಸ್ಜಿಇಸಿಟಿ-ಆಸ್ರಾದಿಂದ ನಡೆಯಿತು ಗ್ರಾಹಕ ಜಾಗೃತಿ ಕಾರ್ಯಕ್ರಮ
ಸಂಬಂಧಿತ ಸುದ್ದಿ: ಮಹಾರಾಷ್ಟ್ರದ ಕ್ರಿಕೆಟ್ ಕ್ಷೇತ್ರದಲ್ಲಿ ‘ಯಶಸ್’ ಸಾಧಿಸುತ್ತಿರುವ ‘ಗಾಣಿಗ ಬ್ರಿಲಿಯಂಟ್’