Saturday, September 21, 2024
spot_img
More

    Latest Posts

    ಕಾರ್ತಿಕ ಮಾಸ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದಲೇ ಪ್ರಥಮ ಪೂಜೆ

    ಬೆಂಗಳೂರು: ಪುರಾಣಪ್ರಸಿದ್ಧ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನದಲ್ಲಿ ಅನಾದಿಕಾಲದಿಂದಲೂ ನಡೆದು ಬಂದಿರುವ ಗಾಣಿಗರ ಕಾರ್ತಿಕ ಮಾಸದ  ಪ್ರಥಮ ಪೂಜೆ ಈ ವರ್ಷ ಅ. 26ರಂದು ನಡೆಯಲಿದೆ.

    ಅಂದು ಬೆಳಗ್ಗೆ ಗಾಣಿಗ ಸಮುದಾಯದ ವತಿಯಿಂದ ಏಕದಶ ರುದ್ರಾಭಿಷೇಕ ಮತ್ತು ಸಾಯಂಕಾಲ ದೀಪೋತ್ಸವ ನಡೆಯಲಿದೆ. ಪ್ರತಿ ಕಾರ್ತಿಕ ಮಾಸದಂದು ಮೊದಲ ಪೂಜೆ ಗಾಣಿಗರ ಕಡೆಯಿಂದ ನಡೆಯುವುದು ಇಲ್ಲಿನ ಪದ್ಧತಿ ಎಂದು ಅಲ್ಲಿನ ಗಾಣಿಗ ಸಮಾಜದ ಪ್ರಮುಖರಾದ ನಾಗೇಶ ನಾರಾಯಣ ಶೆಟ್ಟಿ ತಿಳಿಸಿದ್ದಾರೆ.

    ಈ ಧಾರ್ಮಿಕ ಕಾರ್ಯಕ್ಕೆ ಸಮಾಜ ಬಾಂಧವರು ಸೇವಾಕಾಣಿಕೆಯನ್ನು ಸಲ್ಲಿಸುವ ಮೂಲಕ ದೂರದಿಂದಲೂ ದೇವರಕೃಪೆಗೆ ಪಾತ್ರರಾಗಬಹುದು. ಆಸಕ್ತರು ಯಥಾನುಶಕ್ತಿ ಕಾಣಿಕೆ ಸಲ್ಲಿಸಬಹುದು. ಅಂಥವರಿಗೆ ಪ್ರಸಾದ ಕಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಸೇವಾ ಕಾಣಿಕೆ ಕಳಿಸಬೇಕಾದ ಖಾತೆ ವಿವರ

    • ಉಳಿತಾಯ ಖಾತೆ ಸಂಖ್ಯೆ: 03062200008689
    • ಬ್ಯಾಂಕ್: ಕೆನರಾ ಬ್ಯಾಂಕ್, ಗೋಕರ್ಣ ಶಾಖೆ
    • ಐಎಫ್‌ಎಸ್‌ಸಿ: CNRB0010306 (ಎಲ್ಲ ‘0’ ಸೊನ್ನೆ)

    ಈ ಪೂಜೆಯಲ್ಲಿ ಖುದ್ದಾಗಿ ಭಾಗವಹಿಸುವ ಸಮಾಜದ ಭಕ್ತಾದಿಗಳು ದೇವಸ್ಥಾನದ ವಸ್ತ್ರಸಂಹಿತೆ ಪ್ರಕಾರ ಪಂಚೆ/ಸೀರೆ/ಚೂಡಿದಾರ/ಲಂಗದಾವಣಿ ಧರಿಸಿ ಆಗಮಿಸಬೇಕು. ಹೆಚ್ಚಿನ ಮಾಹಿತಿಗೆ ನಾಗೇಶ ನಾರಾಯಣ ಶೆಟ್ಟಿ (9482928023) ಅವರನ್ನು ಸಂಪರ್ಕಿಸಬಹುದು.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!