ಬೆಂಗಳೂರು: ಕರ್ನಾಟಕದಲ್ಲಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ದಿನಕರ ಕೆ. ಶೆಟ್ಟಿ ಅವರು ವಿಜೇತರಾಗುವ ಮೂಲಕ ಮೂರನೇ ಸಲ ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇವರಿಗೆ ಜೆಡಿಎಸ್ನ ಸೂರಜ್ ನಾಯ್ಕ್ ತೀವ್ರ ಪೈಪೋಟಿ ಒಡ್ಡಿದ್ದರು. ಅಂತಿಮ ಹಂತದವರೆಗೂ ಇವರಿಬ್ಬರ ಹಣಾಹಣಿ ಕುತೂಹಲ ಮೂಡಿಸಿದ್ದು, ಕೊನೆಯಲ್ಲಿ 673 ಮತಗಳೊಂದಿಗೆ ಮಣಿಸುವ ಮೂಲಕ ಇವರು ರೋಚಕ ಜಯವನ್ನು ಗಳಿಸಿದರು.
ದಿನಕರ ಶೆಟ್ಟಿ ಅವರು 59,966 ಮತಗಳನ್ನು ಗಳಿಸಿದ್ದು, ಸೂರಜ್ ನಾಯ್ಕ್ 59,293 ಹಾಗೂ ಕಾಂಗ್ರೆಸ್ನ ನಿವೇದಿತ್ ಆಳ್ವ 19,272 ಮತ ಗಳಿಸಿದ್ದಾರೆ. ಈ ಮೂಲಕ ಮೂರನೇ ಸಲ ಶಾಸಕರಾಗಿ ಆಯ್ಕೆ ಆಗುವಲ್ಲಿ ದಿನಕರ ಶೆಟ್ಟಿ ಯಶಸ್ವಿಯಾದರು.
ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದ ದಿನಕರ ಶೆಟ್ಟಿಯವರಿಗೆ ಕುಮಟಾ ಗಾಣಿಗ ಯುವ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು ಭೇಟಿಯಾಗಿ ಅಭಿನಂದನೆಗಳನ್ನು ತಿಳಿಸಿದರು. ಶಾಸಕರನ್ನು ಅವರ ಮನೆಯಲ್ಲಿ ಭೇಟಿಯಾದ ಬಳಗದವರು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಯುವ ಬಳಗದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗಾಣಿಗ ಸಮಾಜದ ಪ್ರಮುಖರು ಹಾಜರಿದ್ದರು.
ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..
ಸಂಬಂಧಿತ ಸುದ್ದಿ: ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆ; ಕೊನೆಗೂ ಈಡೇರಿತು ಬಹುಕಾಲದ ಪ್ರಾರ್ಥನೆ
ಸಂಬಂಧಿತ ಸುದ್ದಿ: ಎಸ್ಎಸ್ಎಲ್ಸಿ-ಪಿಯುಸಿ ನಂತರ ಮುಂದೇನು?: ವಿದ್ಯಾರ್ಥಿಗಳ ಮಾರ್ಗದರ್ಶನಕ್ಕಾಗಿ ಕಾರ್ಯಾಗಾರ