Saturday, September 21, 2024
spot_img
More

    Latest Posts

    ಮುಂಬೈ ಸಾಫಲ್ಯ ಸೇವಾ ಸಂಘ: ನೂತನ ಅಧ್ಯಕ್ಷರಾಗಿ ಶ್ರೀನಿವಾಸ ಸಫಲ್ಯ ಅವಿರೋಧ ಆಯ್ಕೆ

    ಬೆಂಗಳೂರು: ಮುಂಬೈ ಸಾಫಲ್ಯ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಶ್ರೀನಿವಾಸ ಸಫಲ್ಯ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. 2023-24ರಿಂದ 2025-26ರ ವರೆಗಿನ ಮೂರು ವರುಷದ ಅವಧಿಗೆ ಹೊಸ ಕಾರ್ಯಕಾರಿ ಸಮಿತಿಯನ್ನು ಅ. 7ರಂದು ನಡೆದ ಕಿರುಸಭೆಯಲ್ಲಿ ರಚಿಸಲಾಯಿತು.

    ಕಳೆದ ಆರು ವರ್ಷಗಳಿಂದ ಸಮಾಜದ ಸರ್ವತೋಮುಖ ಏಳಿಗೆಗಾಗಿ ಶಕ್ತಿ ಮೀರಿ ಪ್ರಯತ್ನಿಸಿದ ಹಾಗೂ ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾಗಿ ಹಲವಾರು ಜನಪರ ಯೋಜನೆಗಳೊಂದಿಗೆ ಜನಪ್ರಿಯರಾದ ಶ್ರೀನಿವಾಸ ಸಾಫಲ್ಯ ಅವರನ್ನು ಅವಿರೋಧವಾಗಿ ಸಂಘದ ಅಧ್ಯಕ್ಷರನ್ನಾಗಿ ಮರು ನೇಮಿಸಲಾಯಿತು.

    ಉಪಾಧ್ಯಕ್ಷರಾಗಿ ಕೃಷ್ಣ ಕುಮಾರ್ ಬಂಗೇರ ಮತ್ತು ಜೀವನ್ ಶ್ರೀಯಾನ್, ಪ್ರಧಾನ ಶ್ರೀಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯರಾದ ಭಾಸ್ಕರ್ ಟಿ. ಸಫಲಿಗ ಹಾಗೂ ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ಪುತ್ರನ್ ಮತ್ತು ಕಿರಣ್ ಕುಮಾರ್ ಸಫಲ್ಯ, ಕೋಶಾಧಿಕಾರಿಯಾಗಿ ಹೇಮಂತ್ ಸಫಳಿಗ, ಜೊತೆ ಕೋಶಾಧಿಕಾರಿಯಾಗಿ ಸತೀಶ್ ಕುಂದರ್ ಆಯ್ಕೆ ಆಗಿದ್ದಾರೆ.

    ಕಾರ್ಯಕಾರಿ ಸದಸ್ಯರಾಗಿ ಲೀಲಾಧರ್ ಬಂಗೇರ, ಭಾಸ್ಕರ್ ಬಿ. ಸಫಲಿಗ, ಜಗನ್ನಾಥ್ ಕರ್ಕೇರ, ಮಹೇಶ್ ಬಂಗೇರ, ಶೋಭಾ ಬಂಗೇರ, ಡಾ. ಜಿ. ಪಿ. , ಕುಸುಮಾ, ದಿನೇಶ್ ಕಾಂಚನ್, ದೀಪಕ್ ಕುಂದರ್, ಶೋಭಾ ಕರ್ಕೇರ ಮತ್ತು ಪದ್ಮಿನಿ ಬಂಗೇರ ಆಯ್ಕೆ ಆಗಿದ್ದಾರೆ.

    ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಲಕ್ಷ್ಮಿ ಮೆಂಡನ್. ಉಪಾಧ್ಯಕ್ಷೆಯಾಗಿ ವಿಮಲಾ ಬಂಗೇರ, ಕಾರ್ಯದರ್ಶಿಯಾಗಿ ಉಷಾ ಸಫಲಿಗ ಹಾಗೂ ಕೋಶಾಧಿಕಾರಿಯಾಗಿ ಶಾಂತಾ ಸುವರ್ಣ, ಯುವ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಸಂಧ್ಯಾ ಪುತ್ರನ್, ಉಪ ಕಾರ್ಯಾಧ್ಯಕ್ಷರಾಗಿ ಸಂತೋಷ್ ಕುಂದರ್, ಕಾರ್ಯದರ್ಶಿಯಾಗಿ ಶ್ವೇತಾ ಬಂಗೇರ ಆಯ್ಕೆಯಾಗಿದ್ದಾರೆ.

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ

    ಸಂಬಂಧಿತ ಸುದ್ದಿ: ವಿಶೇಷವಾಗಿ ರಾಜ್ಯೋತ್ಸವ ಆಚರಿಸಿದ ಮಾಲೂರು ತಾಲೂಕು ಯುವ ಗಾಣಿಗರ ಸಂಘ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!