ಬೆಂಗಳೂರು: ಉತ್ತರಕನ್ನಡ ಜಿಲ್ಲೆ ಕುಮಟಾದಲ್ಲಿನ ಚಿತ್ರಗಿಯ ಶ್ರೀರಾಮಚಂದ್ರ ಮಠದಲ್ಲಿ ಕುಮಟಾ ಗಾಣಿಗ ಯುವ ಬಳಗ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಗಾಣಿಗ ಸಮಾಜದ ಪುರಾತನವಾದ ಶ್ರೀರಾಮಚಂದ್ರ ಮಠದಲ್ಲಿ ನ. 27ರ ರಾತ್ರಿ 7ಕ್ಕೆ ದೀಪೋತ್ಸವ ಸಮಾರಂಭ ನೆರವೇರಿತು. ಇದರಲ್ಲಿ ಗಾಣಿಗ ಯುವ ಬಳಗದ ಸದಸ್ಯರು, ಗಾಣಿಗ ಸಮಾಜದ ಸದಸ್ಯರು ಹಾಗೂ ಇತರ ಭಕ್ತರು ಕೂಡ ಪಾಲ್ಗೊಂಡು ದೀಪ ಹಚ್ಚಿ ದೇವರ ಕೃಪೆಗೆ ಪಾತ್ರರಾದರು.
ಇದು ಗಾಣಿಗ ಯುವ ಬಳಗದಿಂದ ರಾಮಚಂದ್ರ ಮಠದಲ್ಲಿ ನಡೆಯುತ್ತಿರುವ ಎರಡನೇ ಕಾರ್ತಿಕ ದೀಪೋತ್ಸವ ಸಮಾರಂಭವಾಗಿದ್ದು, ದೇವಸ್ಥಾನವನ್ನು ದೀಪಗಳಿಂದ ಬೆಳಗುವ ಜೊತೆಗೆ ವಿದ್ಯುದ್ದೀಪಗಳಿಂದಲೂ ಅಲಂಕೃತಗೊಳಿಸಲಾಗಿತ್ತು.
ಈ ದೇವತಾಕಾರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದ ಗಾಣಿಗ ಸಮಾಜದ ಎಲ್ಲ ಬಾಂಧವರಿಗೆ ಗಾಣಿಗ ಯುವ ಬಳಗದ ಅಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ ಗ್ಲೋಬಲ್ ಗಾಣಿಗ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.
ಸಂಬಂಧಿತ ಸುದ್ದಿ: ಕರಾವಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಸೋಮಭಾಯಿ; 4 ದಿನಗಳ ಪ್ರವಾಸದ ಬಳಿಕ ಗುಜರಾತ್ಗೆ ನಿರ್ಗಮನ
ಸಂಬಂಧಿತ ಸುದ್ದಿ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದ ನಡೆಯಿತು ಕಾರ್ತಿಕ ಮಾಸದ ಪ್ರಥಮ ಪೂಜೆ
ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ರ್ಯಾಂಕ್ ವಿದ್ಯಾರ್ಥಿಗಳಿಗೆ ಎಸ್ಜಿಇಸಿಟಿ ನೀಡಲಿದೆ ವಿದ್ಯಾಜ್ಯೋತಿ ಪ್ರಶಸ್ತಿ