ಬೆಂಗಳೂರು: ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಕಮಲಶಿಲೆಯಲ್ಲಿರುವ ಪುರಾಣಪ್ರಸಿದ್ಧ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗಾಣಿಗ ಸಮಾಜದ ಮುಖಂಡರನ್ನು ಸನ್ಮಾನಿಸಲಾಗಿದೆ.
ಸೋಮಕ್ಷತ್ರಿಯ ಗಾಣಿಗ ಸಮಾಜ ಬೆಂಗಳೂರು (ರಿ.) ಇದರ ಅಧ್ಯಕ್ಷ ಎಚ್.ಟಿ. ನರಸಿಂಹ ಅವರನ್ನು ಕಮಲಶಿಲೆ ದೇವಳದ ಗುರುಪ್ರಸಾದ್ ಭಟ್ ಅವರು ಶಾಲು ಹೊದಿಸಿ ಸನ್ಮಾನಿಸಿದರು.
ನರಸಿಂಹ ಅವರ ಜೊತೆಗೆ ಗಾಣಿಗ ಸಮಾಜದ ಇತರ ಮುಖಂಡರನ್ನೂ ಗುರುಪ್ರಸಾದ್ ಭಟ್ ಸನ್ಮಾನಿಸಿದರು. ಸಮಾಜದ ಈ ಗಣ್ಯರು ದೇವಳದ ಭಕ್ತರಾಗಿರುವುದಷ್ಟೇ ಅಲ್ಲದೆ, ಸಾಕಷ್ಟು ದೇಣಿಗೆ/ಕಾಣಿಕೆಗಳನ್ನು ಅರ್ಪಿಸುತ್ತ ಬಂದಿದ್ದಾರೆ.
ಕಮಲಶಿಲೆ ದೇವಳದಲ್ಲಿ ಸನ್ಮಾನಿಸಲ್ಪಟ್ಟ ಗಾಣಿಗ ಸಮಾಜದ ಮುಖಂಡರು
ಸಂಬಂಧಿತ ಸುದ್ದಿ: ಬಾರ್ಕೂರು ದೇವಳದಲ್ಲಿ ಸಂಭ್ರಮದ ದೀಪೋತ್ಸವ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ..
ಸಂಬಂಧಿತ ಸುದ್ದಿ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದ ನಡೆಯಿತು ಕಾರ್ತಿಕ ಮಾಸದ ಪ್ರಥಮ ಪೂಜೆ
ಸಂಬಂಧಿತ ಸುದ್ದಿ: ಕರಾವಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಸೋಮಭಾಯಿ; 4 ದಿನಗಳ ಪ್ರವಾಸದ ಬಳಿಕ ಗುಜರಾತ್ಗೆ ನಿರ್ಗಮನ