ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್, ಸ್ಟ್ರಾಂಗ್ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ವಿಶ್ವನಾಥ್ ಭಾಸ್ಕರ ಗಾಣಿಗ ಅವರು ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೆ ಮೂರು ಗರಿಗಳನ್ನು ಸೇರಿಸಿಕೊಂಡಿದ್ದಲ್ಲದೆ, ಕರ್ನಾಟಕದ ಪರವಾಗಿ ಪ್ರತಿನಿಧಿಸಿ ನಮ್ಮ ನಾಡಿಗೂ ಹೆಮ್ಮೆ ತಂದಿದ್ದಾರೆ.
ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಫೆಬ್ರವರಿ 17ರಿಂದ 21ರ ವರೆಗೆ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್ಷಿಪ್-2021ರಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಕುಂದಾಪುರ ತಾಲೂಕಿನ ಬಾಳಿಕೆರೆ ವಿಶ್ವನಾಥ್ ಭಾಸ್ಕರ್ ಗಾಣಿಗ ಇವರು 93 ಕೆ.ಜಿ. ದೇಹತೂಕ ವಿಭಾಗದಲ್ಲಿ 3 ಚಿನ್ನದ ಪದಕ ಗಳಿಸಿರುತ್ತಾರೆ.
ಇವರು ಸ್ಕ್ವಾಟ್ನಲ್ಲಿ 327.5 ಕೆ.ಜಿ., ಬೆಂಚ್ ಪ್ರೆಸ್ನಲ್ಲಿ 180 ಕೆ.ಜಿ., ಡೆಡ್ಲಿಫ್ಟ್ ವಿಭಾಗದಲ್ಲಿ 320 ಕೆ.ಜಿ. ಭಾರ ಎತ್ತುವ ಮೂಲಕ ಒಟ್ಟು 827.5 ಕೆ.ಜಿ. ಭಾರ ಎತ್ತಿ ಮೂರು ಚಿನ್ನದ ಪದಕ ಪಡೆದಿರುತ್ತಾರೆ. ಇವರು ಬೆಂಗಳೂರಿನ ಪ್ರತಿಷ್ಠಿತ ಬಾಲಾರ್ಕ ಫಿಟ್ನೆಸ್ ಆ್ಯಂಡ್ ಫಿಸಿಯೋಥೆರಪಿ ಸೆಂಟರ್ ಪಾಲುದಾರರಾಗಿದ್ದು, ಅಲ್ಲಿಯೇ ತರಬೇತಿ ಪಡೆದಿರುತ್ತಾರೆ. ಇವರು ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಡೆಡ್ಲಿಫ್ಟ್ ವಿಭಾಗದಲ್ಲಿ ದಾಖಲೆ ಕೂಡ ಹೊಂದಿದ್ದು, 2019ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿರುತ್ತಾರೆ.
ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!
ಸಂಬಂಧಿತ ಸುದ್ದಿ: ತನ್ನದೇ ದಾಖಲೆ ಮುರಿದು ಮತ್ತೊಂದು ದಾಖಲೆ ಸೃಷ್ಟಿಸಿದ ವಿಶ್ವನಾಥ ಭಾಸ್ಕರ ಗಾಣಿಗ