ಬೆಂಗಳೂರು: ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ ಎಂಬ ಮನ್ನಣೆಗೆ ಪಾತ್ರರಾಗಿರುವ, ಅಂತಾರಾಷ್ಟ್ರೀಯ ಮಟ್ಟದ ಪವರ್ಲಿಫ್ಟಿಂಗ್ ಚಾಂಪಿಯನ್ ವಿಶ್ವನಾಥ್ ಭಾಸ್ಕರ್ ಗಾಣಿಗ ಅವರಿಂದ ತರಬೇತಾಗಿರುವ ಪವರ್ ಲಿಫ್ಟರ್ ಸತ್ಯವತಿ ರಾಜ್ಯಮಟ್ಟದ ಪವರ್ಲಿಫ್ಟಿಂಗ್ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಸೀನಿಯರ್ ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಇವರು ಕಂಚಿನ ಪದಕ ಗಳಿಸಿದ್ದಾರೆ. ಇವರು ತಮ್ಮ ಮೊದಲ ಪ್ರಯತ್ನದಲ್ಲೇ ಪದಕವನ್ನು ಗೆದ್ದಿರುವುದು ವಿಶೇಷ.
ಸತ್ಯವತಿ ಮಾತ್ರವಲ್ಲದೆ ವಿಶ್ವನಾಥ್ ಅವರಿಂದ ತರಬೇತಾಗಿರುವ ಅರುಣಿಮಾ, ದತ್ತಾತ್ರೇಯ, ಅಭಿಮನ್ಯು, ಅಭಿಷೇಕ್, ಆಕಾಶ್, ಕಾವ್ಯ ಮತ್ತು ಪೃಥ್ವಿ ಅವರು ಕೂಡ ಈ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿದ್ದಲ್ಲದೆ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ.
ಈ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿರುವವರ ಪೈಕಿ ಅಭಿಮನ್ಯು ಮೂರು ತಿಂಗಳ ಹಿಂದೆ ಕೋವಿಡ್ನಿಂದ ಬಳಲಿದ್ದರೂ ಚೇತರಿಸಿಕೊಂಡು ಸ್ಪರ್ಧೆಗೆ ಸಜ್ಜಾಗಿ, ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಭಿಮನ್ಯು ಸ್ಕ್ವಾಟ್ ವಿಭಾಗದಲ್ಲಿ 170 ಕೆ.ಜಿ., ಬೆಂಚ್ಪ್ರೆಸ್ನಲ್ಲಿ 95 ಕೆ.ಜಿ. ಮತ್ತು ಡೆಡ್ಲಿಫ್ಟ್ನಲ್ಲಿ 90 ಕೆ.ಜಿ. ಭಾರ ಎತ್ತುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯವನ್ನು ಪುನಃ ಸಾಬೀತುಪಡಿಸಿದ್ದಾರೆ. ಸರಿಯಾದ ಮಾರ್ಗದರ್ಶನ, ತರಬೇತಿ ಪಡೆದು ಅಭ್ಯಾಸ ಮಾಡಿದರೆ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎನ್ನುತ್ತಾರೆ ತರಬೇತುದಾರ ವಿಶ್ವನಾಥ್ ಭಾಸ್ಕರ್ ಗಾಣಿಗ.
ರಾಜ್ಯ, ರಾಷ್ಟ್ರಮಟ್ಟದ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಪವರ್ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ವಿಶ್ವನಾಥ್ ಭಾಸ್ಕರ್ ಗಾಣಿಗ, ಭಾರತದ ಪ್ರತಿನಿಧಿಯಾಗಿ ಭಾರ ಎತ್ತಿ ಚಿನ್ನ, ಕಂಚು, ಬೆಳ್ಳಿ ಪದಕಗಳನ್ನು ಗೆದ್ದಿದ್ದಲ್ಲದೆ, ಈ ಹಿಂದಿನ ಕೆಲವು ದಾಖಲೆಗಳನ್ನು ಮುರಿದು ತಮ್ಮದೇ ಆದ ದಾಖಲೆಯನ್ನೂ ಸೃಷ್ಟಿಸಿದ್ದಾರೆ. ಇವರು ಬೆಂಗಳೂರಿನಲ್ಲಿ ಬಾಲರ್ಕ ಫಿಟ್ನೆಸ್ ಆ್ಯಂಡ್ ಫಿಸಿಯೋಥೆರಪಿ ಸೆಂಟರ್ ಹೊಂದಿದ್ದು, ಆರೋಗ್ಯ ವರ್ಧಿಸಿಕೊಳ್ಳುವವರಿಗೆ, ಸ್ಪರ್ಧಿಸುವವರಿಗೆ ತರಬೇತಿಯನ್ನು ನೀಡುತ್ತಿದ್ದಾರೆ.
ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!
ಸಂಬಂಧಿತ ಸುದ್ದಿ: ಕರಾಟೆಯಲ್ಲಿ ಸುಂಟರಗಾಳಿ ಎಬ್ಬಿಸಿದ ಶಶಾಂಕ್; ಟೊರ್ನಡೊ ಕಿಕ್ನಲ್ಲಿ ನೊಬೆಲ್ ವರ್ಲ್ಡ್ ರೆಕಾರ್ಡ್
ಸಂಬಂಧಿತ ಸುದ್ದಿ: ಮಹಾರಾಷ್ಟ್ರದ ಕ್ರಿಕೆಟ್ ಕ್ಷೇತ್ರದಲ್ಲಿ ‘ಯಶಸ್’ ಸಾಧಿಸುತ್ತಿರುವ ‘ಗಾಣಿಗ ಬ್ರಿಲಿಯಂಟ್’